Saturday, April 27, 2024
Homeಅಂತಾರಾಷ್ಟ್ರೀಯವಿಮಾನ ಸ್ಫೋಟಿಸುವ ಖಲಿಸ್ತಾನಿ ಉಗ್ರನ ಬೆದರಿಕೆಯ ತನಿಖೆ ಆರಂಭಿಸಿದ ಕೆನಡಾ

ವಿಮಾನ ಸ್ಫೋಟಿಸುವ ಖಲಿಸ್ತಾನಿ ಉಗ್ರನ ಬೆದರಿಕೆಯ ತನಿಖೆ ಆರಂಭಿಸಿದ ಕೆನಡಾ

ಒಟ್ಟಾವಾ,ನ.10- ಖಲಿಸ್ತಾನಿ ಉಗ್ರ ಗುರ್‍ಪತ್‍ಸಿಂಗ್ ಎಂಬಾತ ಇದೇ 19ರಂದು ಏರ್ ಇಂಡಿಯಾದಲ್ಲಿ ಸಂಚರಿಸದಂತೆ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆನಡಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನಾವು ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ವಿಶೇಷವಾಗಿ ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ಕೆನಡಾ ಸಾರಿಗೆ ಸಚಿವ ಪಾಬ್ಲೊ ರೊಡ್ರಿಗಸ್ ಒಟ್ಟಾವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬೆದರಿಕೆ ಪ್ರಕರಣ ಕುರಿತಂತೆ ರಾಯಲ್ ಕೆನಡಿಯನ್ ಮೆಂಟೆಡ್ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ವಾರ ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಸಿಖ್ಸ್ ಫಾರ್ ಜಸ್ಟಿಸ್‍ನ ಸಾಮಾನ್ಯ ಸಲಹೆಗಾರ ಎಂದು ಗುರುತಿಸಿಕೊಂಡಿರುವ ಗುರುಪತ್‍ವಂತ್ ಸಿಂಗ್ ಪನ್ನುನ್ ಎಂಬಾತ, ನ.19 ರಂದು ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಬಾರದು ಒಂದು ವೇಳೆ ನನ್ನ ಮಾತನ್ನು ಕಡೆಗಣಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದ.

ಇದು ಬೆದರಿಕೆಯಲ್ಲ, ಬದಲಿಗೆ ಭಾರತೀಯ ವ್ಯವಹಾರಗಳನ್ನು ಬಹಿಷ್ಕರಿಸುವ ಕರೆ ಎಂದು ಅವರು ಕೆನಡಾದ ಮಾಧ್ಯಮಗಳಿಗೆ ತಿಳಿಸಿದರು. ಕೆನಡಾವು ಸುಮಾರು 770,000 ಸಿಖ್ಖರಿಗೆ ನೆಲೆಯಾಗಿದೆ, ಅವರು ಒಟ್ಟಾರೆ ಜನಸಂಖ್ಯೆಯ ಸುಮಾರು ಎರಡು ಪ್ರತಿಶತವನ್ನು ಹೊಂದಿದ್ದಾರೆ.

ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ

ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‍ನಲ್ಲಿ ವ್ಯಾಂಕೋವರ್ ಬಳಿ ಕೆನಡಾದ ಸಿಖ್ ನಾಯಕನ ಜೂನ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಪಾತ್ರ ವಹಿಸಿದ್ದಾರೆ ಎಂಬ ಆರೋಪಗಳನ್ನು ಎತ್ತಿದರು ಮತ್ತು ಹತ್ಯೆಗೆ ಸಂಬಂಧವಿದೆ ಎಂದು ನಂಬಲಾದ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದರು.

ಬಾಂಬ್ ಶೆಲ್ ಆರೋಪವನ್ನು ಭಾರತವು ಅಸಂಬದ್ಧ ಎಂದು ತಳ್ಳಿಹಾಕಿದೆ. ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಬಗೆಹರಿಯದ ಕೊಲೆಯ ಮೇಲೆ ಕುಸಿದಿದೆ ಮತ್ತು ಒಟ್ಟಾವಾ ಸಿಖ್ ಪ್ರತ್ಯೇಕತಾವಾದಿಗಳನ್ನು ಹೇಗೆ ನಿಭಾಯಿಸಿದೆ ಎಂಬುದರ ಬಗ್ಗೆ ಭಾರತೀಯರು ಅಸಮಾಧಾನಗೊಂಡಿದ್ದಾರೆ.

RELATED ARTICLES

Latest News