Sunday, April 28, 2024
Homeಬೆಂಗಳೂರುಅವಧಿ ಮೀರಿದ ಔಷಧಿ ಮಾರಾಟ, ಮೆಡಿಕಲ್ ಶಾಪ್‌ಗಳ ಮೇಲೆ ಸಿಸಿಬಿ ದಾಳಿ

ಅವಧಿ ಮೀರಿದ ಔಷಧಿ ಮಾರಾಟ, ಮೆಡಿಕಲ್ ಶಾಪ್‌ಗಳ ಮೇಲೆ ಸಿಸಿಬಿ ದಾಳಿ

ಬೆಂಗಳೂರು,ಸೆ.30- ಔಷಧಿ ಮಾರಾಟ ಮಳಿಗೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಅವಧಿ ಮೀರಿದ ವಿಟಮಿನ್ ಮಾತ್ರೆಗಳು ಹಾಗೂ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಒಂದೂವರೆ ಕೋಟಿ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.

ಬಂತ ಆರೋಪಿಗಳಾದ ತಂದೆ, ಮಗ ಕರ್ನಾಟಕಕ್ಕಷ್ಟೇ ಅಲ್ಲದೆ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಗಳಿಗೂ ಔಷಗಳು, ಹಾಗೂ ಕಾಸ್ಮೆಟಿಕ್ಸ್ಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೀವ ರಕ್ಷಕ ಔಷಧಿಗಳು ಅವಧಿ ಮೀರಿದ ಬಳಿಕ ವಿಷ ಸ್ವರೂಪಕ್ಕೆ ಬದಲಾಗುವುದು ಸಾಮಾನ್ಯ. ಅಂತಹ ಅಪಾಯಕಾರಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ರಾಜಾಜಿನಗರದ ಮೆಡಿಗೇಟ್ಸ್ ಎಂಬ ಕಂಪನಿಯ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಗಳು ಹರಿಯಾಣ, ಪಂಜಾಬ್, ಛಂಡೀಗಡ ಮುಂತಾದ ರಾಜ್ಯಗಳಿಂದ ಔಷಧಿಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಮಾರಾಟವಾಗದೇ ಉಳಿದ ಔಷಧಿಗಳು ಮತ್ತು ಕಾಸ್ಮೆಟಿಕ್ಸ್ಗಳನ್ನು ರಿ ಪ್ಯಾಕ್ ಮತ್ತು ರಿ ಲೇಬಲ್ ಮಾಡುವ ಮೂಲಕ ಹೊಸ ಅವಯನ್ನು ನಮೂದಿಸುತ್ತಿದ್ದರು.

ಶೀಘ್ರದಲ್ಲೇ ಪತನವಾಗಲಿದೆ ಗ್ಯಾರಂಟಿ ಸರ್ಕಾರ : ಕುತೂಹಲ ಕೆರಳಿಸಿದ ಹೆಚ್ಡಿಕೆ ಹೇಳಿಕೆ

ಈ ವಂಚನೆಯ ಅರಿವಿಲ್ಲದ ಜನ ಅವಧಿ ಮೀರಿದ ಔಷಧಿ ಹಾಗೂ ಕಾಸ್ಮೆಟಿಕ್ಸ್ಗಳನ್ನೇ ಖರೀದಿಸುತ್ತಿದ್ದರು. ಹೊಸ ಪ್ಯಾಕ್ಗಳಲ್ಲಿರುವುದೇ ನೈಜ್ಯ ಮತ್ತು ಅವ ಚಾಲ್ತಿಯಲ್ಲಿರುವ ಔಷ ಎಂದು ಜನರನ್ನು ವಂಚಿಸಲಾಗುತ್ತಿತ್ತುಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಂತ ಲಾಭಕ್ಕಾಗಿ ಆರೋಪಿಗಳು ಸಾರ್ವಜನಿಕರ ಜೀವಕ್ಕೆ ಹಾನಿ ಮಾಡುವ ಕೃತ್ಯ ನಡೆಸುತ್ತಿದ್ದರು. ಬೆಂಗಳೂರು ನಗರ, ತೆಲಂಗಾಣದ ಹೈದ್ರಾಬಾದ್, ಆಂಧ್ರಪ್ರದೇಶದ ವಿಶಾಖಪಟ್ಟಣ, ವಿಜಯವಾಡ, ರಾಜಮಂಡ್ರಿ, ಯಲ್ಲೂರು ನಗರಗಳ ಮೆಡಿಕಲ್ ಶಾಪ್ ಮತ್ತು ಸಲೂನ್ಗಳಿಗೆ ಔಷ ಮತ್ತು ಕಾಸ್ಮೆಟಿಕ್ಸ್ಗಳು ಸರಬರಾಜಾಗುತ್ತಿದ್ದೆಂತು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈವರೆಗಿನ ತನಿಖೆಗಳಲ್ಲಿ ವಿಟಮಿನ್ ಸಿ, ಬಿ 3 ಯ ವಿವಿಧ 19 ಕಂಪನಿಗಳ ಮಾತ್ರೆಗಳನ್ನು ರಿ ಪ್ಯಾಕ್, ರಿ ಲೇಬಲ್ ಮಾಡಿ ಮಾರಾಟ ಮಾಡಿರುವುದು ತಿಳಿದುಬಂದಿದೆ. ಸಾರ್ವಜನಿಕರು ಯಾವುದೇ ಔಷಯನ್ನು ಖರೀದಿಸುವ ಮುನ್ನ ಅದರ ಲೇಬಲ್ ಮತ್ತು ಮುಕ್ತಾಯದ ಅವಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು ಹಾಗೂ ರಿ ಪ್ಯಾಕಿಂಗ್ ಬಗ್ಗೆ ಗಮನ ಹರಿಸಬೇಕೆಂದು ಪೊಲೀಸ್ ಆಯುಕ್ತ ಬಿ.ದಯಾನಂದ ಮನವಿ ಮಾಡಿದ್ದಾರೆ.
ಪ್ರಕರಣದ ಕುರಿತು ಸೂಕ್ತ ಕ್ರಮಕ್ಕಾಗಿ ಔಷಧ ನಿಯಂತ್ರಣಾ ಇಲಾಖೆಗೆ ಪೊಲೀಸರು ಮಾಹಿತಿಯನ್ನು ರವಾನೆ ಮಾಡಿದ್ದಾರೆ.

RELATED ARTICLES

Latest News