Sunday, April 28, 2024
Homeರಾಷ್ಟ್ರೀಯಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಅಮರಾವತಿ, ನ.1 (ಪಿಟಿಐ)- ಕೌಶಲ್ಯಾಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಮುಂಜಾನೆ ಇಲ್ಲಿನ ಉಂಡವಳ್ಳಿಯಲ್ಲಿರುವ ತಮ್ಮ ಮನೆ ತಲುಪಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿರುವ ರಾಜಮಹೇಂದ್ರವರಂನಿಂದ 13 ಗಂಟೆಗಳ ಸುದೀರ್ಘ ಪ್ರಯಾಣದ ನಂತರ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕುಟುಂಬ ಸದಸ್ಯರು ಮತ್ತು ಪಕ್ಷದ ಬೆಂಬಲಿಗರಿಂದ ಭಾವನಾತ್ಮಕ ಸ್ವಾಗತದೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ಅವರ ಮನೆಗೆ ತಲುಪಿದರು.

ಟಿಡಿಪಿ ಮುಖ್ಯಸ್ಥರು ನಂತರ ಪತ್ನಿ ಎನ್ ಭುವನೇಶ್ವರಿ ಮತ್ತು ಸಂಬಂಧಿಕರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಆಂಧ್ರಪ್ರದೇಶ ಹೈಕೋರ್ಟ್ ನಿನ್ನೆ ಅವರ ಆರೋಗ್ಯದ ಆಧಾರದ ಮೇಲೆ ನಾಯ್ಡು ಅವರಿಗೆ ನಾಲ್ಕು ವಾರಗಳ ಅವಗೆ ಮಧ್ಯಂತರ ಜಾಮೀನು ನೀಡಿತ್ತು.

ನಾಯ್ಡು ಅವರ ಬೆಂಗಾವಲು ಪಡೆ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರದಿಂದ ಹೊರಟಿತು. ಆಂಧ್ರಪ್ರದೇಶದ ಅವರ ನಿವಾಸ ಕೃಷ್ಣಾ ನದಿ ದಡದಲ್ಲಿರುವ ಗುಂಟೂರು ಜಿಲ್ಲೆಯ ಉಂಡವಳ್ಳಿಗೆ ತೆರಳುವ ಮಾರ್ಗಮಧ್ಯೆ ರಸ್ತೆಬದಿಯಲ್ಲಿ ನೂರಾರು ಜನರು ಜಮಾಯಿಸಿ ಮಾಜಿ ಸಿಎಂಗೆ ಜಯಕಾರ ಹಾಕಿದರು.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ನಾಯ್ಡು ಅವರ ದರ್ಶನ ಪಡೆಯಲು ಪಕ್ಷದ ಹಲವಾರು ಬೆಂಬಲಿಗರು ಬಂದಿದ್ದರಿಂದ ಅವರ ಪ್ರಯಾಣದ ಆರಂಭಿಕ ಭಾಗದಲ್ಲಿ ಸುಮಾರು 5 ಕಿ.ಮೀ ವರೆಗೆ ಸಂಚಾರ ಸ್ಥಗಿತಗೊಂಡಿತು. ಪಕ್ಷದ ವರಿಷ್ಠರ ಬೆಂಗಾವಲು ಪಡೆಯೊಂದಿಗೆ ಹಲವು ಟಿಡಿಪಿ ನಾಯಕರು ಕೂಡ ಇದ್ದರು.

RELATED ARTICLES

Latest News