ನಾರಾಯಣಪುರ, ಜೂ.26- ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ.
ಅಭುಜ್ಮಾದ್ ಪ್ರದೇಶದ ಕೊಲ್ಕಿಮೇಟ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಕಳೆದ ರಾತ್ರಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾವೋವಾದಿಗಳ ಮಾಡ್ ವಿಭಾಗದಲ್ಲಿ ಹಿರಿಯ ಕೇಡರ್ಗಳ ಉಪಸ್ಥಿತಿಯ ಬಗ್ಗೆ ಮಾಹಿತಿಯ ಆಧಾರದ ಮೇಲೆ ನಾರಾಯಣಪುರ ಮತ್ತು ಕೊಂಡಗಾಂವ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆದಿದೆ.
ಇಲ್ಲಿಯವರೆಗೆ, ಇಬ್ಬರು ಮಹಿಳಾ ನಕ್ಸಲರ ಶವಗಳು, 2 ರೈಫಲ್ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದರು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು.
- ಚೀನಾದಲ್ಲಿ ಪ್ರವಾಹಕ್ಕೆ ಆರು ಮಂದಿ ಬಲಿ
- ಸಂಸತ್ಗಿಂತ ಸಂವಿಧಾನವೇ ಸರ್ವೋಚ್ಚ : ಸಿಜೆಐ ಬಿ.ಆರ್. ಗವಾಯಿ
- 50 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಪೊಲೀಸರು
- ರಕ್ಷಣಾ ಸ್ವಾವಲಂಬನೆಗೆ ಒತ್ತು : ಪ್ರಧಾನಿ ಮೋದಿ
- ಅಧ್ಯಕ್ಷರು, ಸಚಿವರ, ಬದಲಾವಣೆ : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಗರಿಗೆದರಿದ ಚರ್ಚೆ