Saturday, May 11, 2024
Homeಇದೀಗ ಬಂದ ಸುದ್ದಿಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2023)

ನಿತ್ಯ ನೀತಿ : ಭಕ್ತಿಯಿಂದ ಸಮರ್ಪಿಸಿಕೊಂಡವರನ್ನು ಭಗವಂತನೆಂದೂ ಕೈ ಬಿಡುವುದಿಲ್ಲ. ಭಕ್ತನು ಭಕ್ತಿ ಸಂಪತ್ತಿನ ಸದುಪಯೋಗವನ್ನು ಪಡೆದುಕೊಳ್ಳಬೇಕು. ಭಗವಂತ ಭಕ್ತರ ಪರಾಧೀನ.

ಪಂಚಾಂಗ ಮಂಗಳವಾರ 26-09-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಶ್ರವಣ / ಯೋಗ: ಸುಕರ್ಮಾ / ಕರಣ: ಭವ

ಸೂರ್ಯೋದಯ ; ಬೆ.06.09
ಸೂರ್ಯಾಸ್ತ : 06.13
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಕಾರ್ಯ ಸಾಮಥ್ರ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ವೃಷಭ: ನಿಮ್ಮಿಂದ ಕೆಟ್ಟ ಕೆಲಸ ಮಾಡಿಸುವ ಪ್ರಯತ್ನಕ್ಕೆ ನಿಮ್ಮ ಸ್ನೇಹಿತರೇ ಯತ್ನ ನಡೆಸುವರು.
ಮಿಥುನ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯುವುದು ಸೂಕ್ತ.

ಕಟಕ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ. ಸಣ್ಣ ಸಣ್ಣ ವಿಚಾರಕ್ಕೂ ನೆರೆಹೊರೆ ಯವರ ಕಿರಿಕಿರಿ ತಪ್ಪದು.
ಸಿಂಹ: ಜವಾಬ್ದಾರಿ ಯುತವಾದ ಕಾರ್ಯಗಳ ಬಗ್ಗೆ ಗಮನ ಹರಿಸಿ.
ಕನ್ಯಾ: ಮನೆಯ ವಿಷಯದಲ್ಲಿ ಯಾವುದೇ ಚಿಂತೆ ಬೇಡ. ವ್ಯಾಪಾರ- ವ್ಯವಹಾರಗಳು ಸರಾಗವಾಗಿ ನಡೆಯಲಿವೆ.

ತುಲಾ: ಆರ್ಥಿಕ ತಾಪತ್ರಯಗಳ ಬಗ್ಗೆ ಬೇರೆಯವರೊಂದಿಗೆ ಹೇಳಿಕೊಳ್ಳಲಾಗದು.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕಂದಾಯ ಅಕಾರಿಗಳಿಗೆ ಕೆಲಸದ ಹೊಣೆ ಹೆಚ್ಚಾಗುವುದು. ಉತ್ತಮ ದಿನ.
ಧನುಸ್ಸು: ಹಲವಾರು ಆಸಕ್ತಿದಾಯಕ ವಿಚಾರಗಳು ನಿಮ್ಮ ಕಿವಿಗೆ ಬೀಳಲಿವೆ. ದೂರ ಪ್ರಯಾಣ ಬೇಡ.

ಮಕರ: ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ.
ಕುಂಭ: ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ.
ಮೀನ: ಒಂದು ವಿಚಾರದ ಬಗ್ಗೆ ತಿಳಿದುಕೊಳ್ಳದೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದಿರಿ.

RELATED ARTICLES

Latest News