Thursday, May 2, 2024
Homeಮನರಂಜನೆಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ವಿಚಾರಣೆಗೆ ದರ್ಶನ್ ಹಾಜರು

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ವಿಚಾರಣೆಗೆ ದರ್ಶನ್ ಹಾಜರು

ಬೆಂಗಳೂರು,ನ.15- ಮಹಿಳೆಗೆ ಸಾಕುನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಅವರು ಆರ್.ಆರ್. ನಗರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾದರು. ಅಮಿತಾ ಜಿಂದಾಲ್ ಎಂಬುವವರು ದರ್ಶನ್ ಅವರ ಮನೆ ಮುಂಭಾಗದ ಖಾಲಿ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದಾಗ ಕಾರನ್ನು ತೆಗೆದುಕೊಳ್ಳುವ ವೇಳೆ ದರ್ಶನ್ ಅವರ ಸಾಕು ನಾಯಿ ಅವರ ಮೇಲೆ ದಾಳಿ ಮಾಡಿ ಕಚ್ಚಿತ್ತು.

ಈ ಬಗ್ಗೆ ಅಮಿತಾ ಅವರು ದೂರು ನೀಡಿದ್ದರು. ಈ ಸಂಬಂಧ ದರ್ಶನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗಲಿಲ್ಲ. 2ನೇ ಭಾರಿ ನೋಟಿಸ್ ಜಾರಿ ಮಾಡಿದ್ದರಿಂದ ಇಂದು ದರ್ಶನ್ ಅವರು ವಿಚಾರಣೆಗಾಗಿ ಠಾಣೆಗೆ ಹಾಜರಾಗಿ ತನಿಖಾಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

RELATED ARTICLES

Latest News