Sunday, October 6, 2024
Homeರಾಜಕೀಯ | Politicsಕಳಂಕಿತ ಸಿಎಂ ದಸರಾ ಉದ್ಘಾಟಿಸಿದ್ದು ನಾಡಿಗೆ ಅಪಕೀರ್ತಿ : ಜೆಡಿಎಸ್‌‍

ಕಳಂಕಿತ ಸಿಎಂ ದಸರಾ ಉದ್ಘಾಟಿಸಿದ್ದು ನಾಡಿಗೆ ಅಪಕೀರ್ತಿ : ಜೆಡಿಎಸ್‌‍

Dasara inaugurated by CM is dishonor

ಬೆಂಗಳೂರು,ಅ.4- ಮುಡಾ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಹಿನ್ನಲೆಯ ಭವ್ಯ ಪರಂಪರೆಯ ಮೈಸೂರು ದಸರಾ ಉದ್ಘಾಟಿಸಿದ್ದು, ನಾಡಿಗೆ ಕಪ್ಪುಚುಕ್ಕೆ ಎಂದು ಜೆಡಿಎಸ್‌‍ ಆರೋಪ ಮಾಡಿದೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍ ಕಳಂಕಿತ ಮುಖ್ಯಮಂತ್ರಿ ಹಣೆಪಟ್ಟಿ ಹೊತ್ತಿರುವ ನೀವು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರೆ ನಾಡಿಗೆ ಅಪಕೀರ್ತಿ ಎಂದು ಹೇಳಿದೆ.

ಹಲವು ಹಗರಣಗಳಲ್ಲಿ ಮುಳುಗಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯನವರು ಕರುನಾಡ ಜನರ ಆತಸಾಕ್ಷಿಗೆ ದ್ರೋಹ ಬಗೆಯಬಾರದು. ಅಶುದ್ಧ ಕೈಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಮಾಡಿದ್ದು ಸರಿಯೇ ಎಂದು ಜೆಡಿಎಸ್‌‍ ಪ್ರಶ್ನಿಸಿದೆ.

RELATED ARTICLES

Latest News