Thursday, May 9, 2024
Homeರಾಷ್ಟ್ರೀಯಪತ್ನಿ ಶೀಲ ಶಂಕಿಸಿ ಇಡೀ ಕುಟುಂಬವನ್ನೆ ಬಲಿ ತೆಗೆದುಕೊಂಡು ತಾನು ಪ್ರಾಣ ತೆತ್ತ

ಪತ್ನಿ ಶೀಲ ಶಂಕಿಸಿ ಇಡೀ ಕುಟುಂಬವನ್ನೆ ಬಲಿ ತೆಗೆದುಕೊಂಡು ತಾನು ಪ್ರಾಣ ತೆತ್ತ

ಬರಾಸತ್, ನ.20 (ಪಿಟಿಐ) ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಫ್ಲಾಟ್‍ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಟ್ಟೆ ವ್ಯಾಪಾರಿ 52 ವರ್ಷದ ಬೃಂದಾಬನ್ ಕರ್ಮಾಕರ್, ನಲವತ್ತರ ಹರೆಯದ ಅವರ ಪತ್ನಿ ದೇಬಶ್ರೀ ಕರ್ಮಾಕರ್, ಅವರ 17 ವರ್ಷದ ಮಗಳು ದೇಬಲೀನಾ ಮತ್ತು ಎಂಟು ವರ್ಷದ ಮಗ ಉತ್ಸಾಹ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಖಾರ್ದಾ ಪ್ರದೇಶದ ಎಂಎಸ್ ಮುಖರ್ಜಿ ರಸ್ತೆಯಲ್ಲಿರುವ ಮುಚ್ಚಿದ ಅಪಾರ್ಟ್‍ಮೆಂಟ್‍ನಲ್ಲಿ ಶವಗಳು ಪತ್ತೆಯಾಗಿವೆ. ಮನೆ ಯಜಮಾನ ಕುಟುಂಬಸ್ಥರಿಗೆ ವಿಷ ಕುಡಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅವರ ದೇಹವು ಚಾವಣಿಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತರ ಮೂರು ಶವಗಳು ಫ್ಲಾಟ್‍ನಲ್ಲಿ ವಿವಿಧ ಸ್ಥಳಗಳಲ್ಲಿವೆ ಎಂದು ಅವರು ಹೇಳಿದರು. ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದ್ದು, ಅದನ್ನು ಸಹಿಸಲಾಗುತ್ತಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದು, ಹೀಗಾಗಿ ಆತ ತೀವ್ರ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ವಿಶಾಖಪಟ್ಟಣಂ ಜೆಟ್ಟಿ ಪ್ರದೇಶದಲ್ಲಿ 25 ದೋಣಿಗಳು ಬೆಂಕಿಗೆ ಆಹುತಿ

ಅಪಾರ್ಟ್‍ಮೆಂಟ್‍ನಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಳಗಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ಒಡೆದು ತೆರೆಯಬೇಕಾಯಿತು ಎಂದರು. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News