Thursday, May 2, 2024
Homeರಾಷ್ಟ್ರೀಯ2 ಕೋಟಿಗೆ ದಾವೂದ್ ನಿವೇಶನ ಖರೀದಿಸಿದ ವಕೀಲ

2 ಕೋಟಿಗೆ ದಾವೂದ್ ನಿವೇಶನ ಖರೀದಿಸಿದ ವಕೀಲ

ಮುಂಬೈ,ಜ.6- ಮಹಾರಾಷ್ಟ್ರದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ನಿವೇಶನವನ್ನು ನಿನ್ನೆ 2 ಕೋಟಿಗೆ ಖರೀದಿಸಿರುವ ವಕೀಲರೊಬ್ಬರು ಅಲ್ಲಿ ಸನಾತನ ಶಾಲೆ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ. ಮಾಜಿ ಶಿವಸೇನಾ ನಾಯಕ ಅಜಯ್ ಶ್ರೀವಾಸ್ತವ ಅವರು ಪ್ಲಾಟ್‍ಗಾಗಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ ಏಕೆಂದರೆ ಸರ್ವೆ ಸಂಖ್ಯೆ ಮತ್ತು ಮೊತ್ತವು ಅವರ ಪರವಾಗಿ ಕೆಲಸ ಮಾಡುವ ಸಂಖ್ಯಾಶಾಸ್ತ್ರದ ಅಂಕಿ ಅಂಶವನ್ನು ಹೊಂದಿದೆಯಂತೆ.

ನಾನು ಸನಾತನ ಹಿಂದೂ ಮತ್ತು ನಾವು ನಮ್ಮ ಪಂಡಿತ್‍ಜೀ ಅವರನ್ನು ಅನುಸರಿಸುತ್ತೇವೆ. ಸರ್ವೆ ನಂಬರ್ (ಪ್ಲಾಟ್‍ನ) ಮತ್ತು ಮೊತ್ತವು ಸಂಖ್ಯಾಶಾಸ್ತ್ರದ ಪ್ರಕಾರ ನನ್ನ ಪರವಾಗಿ ಹೋಗುವ ಅಂಕಿ ಅಂಶವನ್ನು ಹೊಂದಿದೆ. ಅದನ್ನು ಪರಿವರ್ತಿಸಿದ ನಂತರ ನಾನು ಈ ಪ್ಲಾಟ್‍ನಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿರುವ ವಾಸ್ತವ ಅವರು ಈ ಹಿಂದೆ ಅದೇ ಗ್ರಾಮದಲ್ಲಿ ಅವರ ಬಾಲ್ಯದ ಮನೆ ಸೇರಿದಂತೆ ಭೂಗತ ಪಾತಕಿಯ ಮೂರು ಆಸ್ತಿಗಳನ್ನು ಖರೀದಿಸಿದ್ದರು.

ಸಂಸದ ಪ್ರತಾಪ್ ಸಿಂಹ ಸೋದರನ ಪ್ರಕರಣಕ್ಕೆ ಬಿಗ್‍ಟ್ವಿಸ್ಟ್ ಕೊಟ್ಟ ಎಚ್‍ಡಿಕೆ

ಮಾರ್ಚ್ 2001 ರಲ್ಲಿ ನಡೆದ ಹರಾಜಿನಲ್ಲಿ ಶ್ರೀವಾಸ್ತವ ಮಾತ್ರ ಬಿಡ್‍ದಾರರಾಗಿದ್ದರು, ವಕೀಲರು ಮುಂಬೈನ ನಾಗ್ಪಾಡಾದಲ್ಲಿ ಭಯೋತ್ಪಾದಕನ ಒಡೆತನದ ಎರಡು ಅಂಗಡಿಗಳನ್ನು ಖರೀದಿಸಿದ್ದರು. 2020 ರಲ್ಲಿ ವಕೀಲರು ಭಯೋತ್ಪಾದಕ ಜನಿಸಿದ ಮುಂಬಾಕೆ ಗ್ರಾಮದಲ್ಲಿ ದಾವೂದ್ ಅವರ ಬಾಲ್ಯದ ಮನೆಯನ್ನು ಖರೀದಿಸಿದರು. ದಾಖಲೆಗಳಲ್ಲಿ ಕೆಲವು ವ್ಯತ್ಯಾಸಗಳಿಂದಾಗಿ ಅವರು ಇನ್ನೂ ಬಂಗಲೆಯ ಪತ್ರವನ್ನು ಪಡೆದಿಲ್ಲ. ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಲಾಗಿದ್ದು, ಶೀಘ್ರವೇ ದಾಖಲೆ ಸಿಗುವ ಭರವಸೆ ಹೊಂದಿದ್ದಾರೆ.

ನಾನು 2020 ರಲ್ಲಿ ದಾವೂದ್ ಇಬ್ರಾಹಿಂನ ಬಂಗಲೆಗಾಗಿ ಬಿಡ್ ಮಾಡಿದ್ದೇನೆ. ಸನಾತನ ಧರ್ಮ ಪಾಠಶಾಲಾ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ ಮತ್ತು ಅದನ್ನು ನೋಂದಾಯಿಸಿದ ನಂತರ ನಾನು ಅಲ್ಲಿಯೂ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ಅವರು ಹೇಳಿದರು. ದಾವೂದ್ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳ ಹರಾಜು ಪ್ರಕ್ರಿಯೆ ನಿನ್ನೆ ಮುಕ್ತಾಯವಾಗಿದೆ.

RELATED ARTICLES

Latest News