Sunday, April 28, 2024
Homeರಾಷ್ಟ್ರೀಯಚರ್ಮರೋಗ ತಜ್ಞರಿಂದ ನಾಯ್ಡು ಆರೋಗ್ಯ ತಪಾಸಣೆ

ಚರ್ಮರೋಗ ತಜ್ಞರಿಂದ ನಾಯ್ಡು ಆರೋಗ್ಯ ತಪಾಸಣೆ

ಪೂರ್ವ ಗೋದಾವರಿ,ಅ.13- ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಚರ್ಮ ಅಲರ್ಜಿಯಾಗಿರುವ ಬಗ್ಗೆ ಜೈಲು ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಚರ್ಮರೋಗ ತಜ್ಞರ ತಂಡ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಅವರನ್ನು ತಪಾಸಣೆ ನಡೆಸಿತು.

ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ನೋಡಿಕೊಳ್ಳಲು ಚರ್ಮರೋಗ ವಿಭಾಗದ ಒಬ್ಬರು ಸಹಾಯಕ ಪ್ರಾಧ್ಯಾಪಕರು ಮತ್ತು ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರನ್ನು ನಿಯೋಜಿಸಲಾಗಿದೆ ಎಂದು ಜೈಲು ಅ„ಕಾರಿಗಳು ತಿಳಿಸಿದ್ದಾರೆ.

50 ವರ್ಷದ ಹಿಂದಿನ ಕೊಲೆ ಪ್ರಕರಣದಲ್ಲಿ 80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಬಹುಕೋಟಿ ಕೌಶಲ ಅಭಿವೃದ್ಧಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಾಯ್ಡು ಅವರನ್ನು ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಳೆದ ತಿಂಗಳು ಬಂಧಿಸಿತ್ತು. ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ಅವರು 33 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ಅಮರಾವತಿ ಒಳವರ್ತುಲ ರಸ್ತೆ ಪ್ರಕರಣದಲ್ಲಿ ಅಕ್ಟೋಬರ್ 16 ರವರೆಗೆ ಆಂಧ್ರಪ್ರದೇಶ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬಹುಕೋಟಿ ರೂಪಾಯಿ ಫೈಬರ್ ನೆಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರಿಗೆ ಪ್ರಸನರ್ ಇನ್ ಟ್ರಾನ್ಸಿಟ್ (ಪಿಟಿ) ವಾರಂಟ್ ಹೊರಡಿಸಲು ಇಲ್ಲಿನ ಎಸಿಬಿ ನ್ಯಾಯಾಲಯ ಆಂಧ್ರಪ್ರದೇಶ ಸಿಐಡಿಗೆ ಅನುಮತಿ ನೀಡಿದೆ.

ಸೋಮವಾರ ಬೆಳಗ್ಗೆ 10:00 ರಿಂದ ಸಂಜೆ 5:00 ಗಂಟೆಯೊಳಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥರನ್ನು ದೈಹಿಕವಾಗಿ ಹಾಜರುಪಡಿಸುವಂತೆ ವಿಜಯವಾಡದ ಎಸಿಬಿ ನ್ಯಾಯಾಲಯ ಆದೇಶಿಸಿದೆ. ಕೌಶಲಾಭಿವೃದ್ಧಿ ಪ್ರಕರಣ ಮತ್ತು ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದ ನಂತರ ನಾಯ್ಡು ಅವರನ್ನು ಆರೋಪಿಯನ್ನಾಗಿ ಹೆಸರಿಸಲಾದ ಮೂರನೇ ಅಕ್ರಮ ಪ್ರಕರಣ ಇದಾಗಿದೆ.

ಕೇರಳದ ರೆಸಾರ್ಟ್‍ನಲ್ಲಿ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳು ಪ್ರತ್ಯಕ್ಷ

ಫೈಬರ್‍ನೆಟ್ ಹಗರಣವು ಎಪಿ ಫೈಬರ್‍ನೆಟ್ ಯೋಜನೆಯ ಹಂತ-1 ರ 330 ಕೋಟಿಯ ವರ್ಕ್ ಆರ್ಡರ್ ಅನ್ನು ಅನುಕೂಲಕರ ಕಂಪನಿಗೆ ನಿಯಮಗಳನ್ನು ಉಲ್ಲಂಸಿ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ದುರ್ಬಳಕೆ ಮಾಡುವ ಮೂಲಕ ಟೆಂಡರ್ ಪ್ರಕ್ರಿಯೆಯಲ್ಲಿ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ನಾಯ್ಡು ಅವರು ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಇಲಾಖೆಗಳ ಫೋರ್ಟ್ಫೋಲಿಯೊವನ್ನು ಹೊಂದಿದ್ದಾಗ ಹಗರಣ ನಡೆದಿದೆ ಎನ್ನಲಾಗಿದೆ.

RELATED ARTICLES

Latest News