Friday, June 13, 2025
Homeರಾಷ್ಟ್ರೀಯ | National2700 ಕೋಟಿ ವಂಚನೆ ಪ್ರಕರಣ ಬೆನ್ನತ್ತಿದ ಇಡಿ

2700 ಕೋಟಿ ವಂಚನೆ ಪ್ರಕರಣ ಬೆನ್ನತ್ತಿದ ಇಡಿ

ನವದೆಹಲಿ, ಜೂ. 12 (ಪಿಟಿಐ) ಹೂಡಿಕೆದಾರರಿಗೆ 2,700 ಕೋಟಿ ರೂ. ವಂಚನೆ ಆರೋಪದ ಮೇಲೆ ರಾಜಸ್ಥಾನ ಮತ್ತು ಗುಜರಾತ್‌ನ ವಿವಿಧ ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನೆಕ್ಸಾ ಎವರ್‌ಗ್ರೀನ್‌ ಎಂಬ ಕಂಪನಿಯ ವಿರುದ್ಧ ರಾಜಸ್ಥಾನ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಿಂದ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗುಜರಾತ್‌ನ ಧೋಲೇರಾ ನಗರದಲ್ಲಿ ಹೆಚ್ಚಿನ ಆದಾಯ ಮತ್ತು ಭೂಮಿಯನ್ನು ನೀಡುವ ಭರವಸೆ ನೀಡುವ ಮೂಲಕ ಕಂಪನಿಯು ಹೂಡಿಕೆದಾರರಿಗೆ 2,700 ಕೋಟಿ ರೂ.ಗಳಷ್ಟು ವಂಚಿಸಿದೆ ಎಂದು ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ತನಿಖೆಯ ಭಾಗವಾಗಿ ರಾಜಸ್ಥಾನದ ಸಿಕಾರ್‌, ಜೈಪುರ, ಜೋಧ್‌ಪುರ ಮತ್ತು ಜುನ್‌ಜುನು ಮತ್ತು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸುಮಾರು ಎರಡು ಡಜನ್‌ ಸ್ಥಳಗಳನ್ನು ಶೋಧಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಾಳಿ ವೇಳೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

RELATED ARTICLES

Latest News