Thursday, May 9, 2024
Homeಬೆಂಗಳೂರುಬೆಂಕಿ ಅವಘಡ : 4 ವಾಹನಗಳು ಭಸ್ಮ , ಮನೆಗೆ ಹಾನಿ

ಬೆಂಕಿ ಅವಘಡ : 4 ವಾಹನಗಳು ಭಸ್ಮ , ಮನೆಗೆ ಹಾನಿ

ಬೆಂಗಳೂರು, ಏ.3- ಮನೆ ಮುಂದೆ ನಿಲ್ಲಿಸಿದಂತಹ ನಾಲ್ಕು ವಾಹನಗಳು ಹಾಗೂ ಮನೆಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಸಾರಕ್ಕಿಯ ಶಿವನ ದೇವಸ್ಥಾನ ಸಮೀಪದ ಮನೆಯೊಂದರ ಮುಂದೆ ನಾಲ್ಕು ವಾಹನ ಗಳನ್ನು ನಿಲ್ಲಿಸಲಾಗಿತ್ತು.

ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ಕು ವಾಹನಗಳು ಹೊತ್ತಿಉರಿದಿದ್ದು, ಈ ಬೆಂಕಿಯ ಕಿಡಿ ಮನೆಗೂ ತಾಗಿದ್ದರಿಂದ ಕಿಟಕಿ ಗಾಜುಗಳು ಒಡೆದುಕೊಂಡಿವೆ. ಅಲ್ಲದೇ ಗೋಡೆಗೂ ಹಾನಿಯಾಗಿದೆ.ಬೆಂಕಿಯ ಕಾವಿನಿಂದ ಎಚ್ಚೆತ್ತುಕೊಂಡ ಮನೆಯವರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಇದು ಕಿಡಿಗೇಡಿಗಳ ಕೃತ್ಯವೋ ಇಲ್ಲವೇ, ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜೆ.ಪಿ. ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News