Thursday, October 24, 2024
Homeಜಿಲ್ಲಾ ಸುದ್ದಿಗಳು | District Newsಮಧ್ಯರಾತ್ರಿ ಬಂದು ಹಣ್ಣು ಕದ್ದ ಕಳ್ಳ

ಮಧ್ಯರಾತ್ರಿ ಬಂದು ಹಣ್ಣು ಕದ್ದ ಕಳ್ಳ

ಮೈಸೂರು, ಅ.14- ಮೈಸೂರು ನಗರದ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆಯಲ್ಲಿ ಮಧ್ಯ ರಾತ್ರಿ ವ್ಯಕ್ತಿಯೊಬ್ಬ ಹಣ್ಣುಗಳನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೇರೆಯಾಗಿದೆ.

ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದ ವ್ಯಕ್ತಿ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಕಟ್ಟಿದ ಲಾರಿಯ ಮೇಲೆ ಹತ್ತಿ ಟಾರ್ಪಲ್ ಹರಿದು ಹಣ್ಣುಗಳನ್ನು ಕಳ್ಳತನ ಮಾಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೇರಿಯಾಗಿದೆ. ಕಳ್ಳರ ಹಾವಳಿಯಿಂದಾಗಿ ಮೈಸೂರಿನ ನ್ಯೂ ಸಯಾಜಿ ರಾವ್ ರಸ್ತೆಯಲ್ಲಿರುವ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಹಣ್ಣುಗಳು ಸಗಟು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ.

ಮೊದಮೊದಲು ಚಿನ್ನ ,ಹಣ ಕದಿಯುತ್ತಿದ್ದ ಕಳ್ಳರು ಈಗೀಗ ಹಣ್ಣುಗಳು ಕದಿಯಲೂ ಶುರು ಮಾಡಿದ್ದಾರೆ. ಮೈಸೂರಿನಲ್ಲಿ ಎರಡು ಮೂರು ತಿಂಗಿಳಿಂದ ಹಣ್ಣು ಗಳ್ಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರೆ. ತಿಂಗಿಳಿನಿಂದಲ್ಲೂ ಮಾರುಕಟ್ಟೆಯಲ್ಲಿ ಕಳ್ಳರ ಕಾಟ ಅಧಿಕವಾಗಿದೆ.

ಮಾರಾಟಕ್ಕೆ ತರಿಸುತ್ತಿದ್ದ ದಾಳಿಂಬೆ, ಸೇಬು ಲಾರಿಗಳ ಮೇಲೆ ಕಳ್ಳರು ಕಳವು ಮಾಡ್ತಾ ಇದ್ದಾರೆ ಎಂದ ಲಾರಿ ಡ್ರೈವರ್ ಹಾಗೂ ಅಂಗಡಿ ಮಾಲೀಕರು

RELATED ARTICLES

Latest News