Thursday, May 2, 2024
Homeರಾಷ್ಟ್ರೀಯಬಾಬರ್ ರಸ್ತೆ ಮರುನಾಮಕರಣಕ್ಕೆ ಹಿಂದೂ ಸೇನೆ ಆಗ್ರಹ

ಬಾಬರ್ ರಸ್ತೆ ಮರುನಾಮಕರಣಕ್ಕೆ ಹಿಂದೂ ಸೇನೆ ಆಗ್ರಹ

ನವದೆಹಲಿ, ಜ. 20 (ಪಿಟಿಐ) ಕೇಂದ್ರ ದೆಹಲಿಯ ಬಾಬರ್ ರಸ್ತೆಗೆ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ಬಲಪಂಥೀಯ ಸಂಘಟನೆ ಹಿಂದೂ ಸೇನೆ ಶನಿವಾರ ಫಲಕವನ್ನು ವಿರೂಪಗೊಳಿಸಿದೆ. ಸಂಘಟನೆಯ ಕಾರ್ಯಕರ್ತರು ಅಯೋಧ್ಯಾ ಮಾರ್ಗ ಎಂದು ಬರೆದಿರುವ ಪೋಸ್ಟರ್ ಅಂಟಿಸಿದ್ದಾರೆ.

ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ (ಎನ್‍ಡಿಎಂಸಿ) ಅಧಿಕಾರಿಯೊಬ್ಬರು ಪೋಸ್ಟರ್ ಅನ್ನು ತೆಗೆದುಹಾಕುತ್ತಿದ್ದಾರೆ ಮತ್ತು ಈ ವಿಷಯದಲ್ಲಿ ಪೊಲೀಸರಿಗೆ ದೂರು ದಾಖಲಿಸಲಿದ್ದಾರೆ. ಏತನ್ಮಧ್ಯೆ, ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಮಾತನಾಡಿ, ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕು ಎಂದು ಸಂಘಟನೆಯು ಬಹಳ ದಿನಗಳಿಂದ ಒತ್ತಾಯಿಸುತ್ತಿದೆ.

ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಜಾಮೀನು ಕೊಡಿಸಿದ ಕಾಂಗ್ರೆಸ್ ವಕೀಲನ ಉಚ್ಛಾಟನೆ

ಈಗ ರಸ್ತೆ ಹೆಸರು ಬದಲಾವಣೆಗೆ ಸೂಕ್ತ ಕಾಲವಾಗಿದೆ ಈ ಕೂಡಲೆ ಸಂಬಂಧಪಟ್ಟವರು ಬಾಬರ್ ರಸ್ತೆಗೆ ಅಯೋಧ್ಯಾ ಮಾರ್ಗ ಎಂದು ಮರುನಾಮಕರಣ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

RELATED ARTICLES

Latest News