Friday, May 30, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಇರಿದು ಕೊಂದಿದ್ದ ಪತಿ ಸೆರೆ

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಇರಿದು ಕೊಂದಿದ್ದ ಪತಿ ಸೆರೆ

Husband arrested for stabbing wife to death

ಚಿಕ್ಕಮಗಳೂರು,ಮೇ 29– ಪತ್ನಿಯನ್ನು ಇರಿದು ಕೊಂದು ಕಾಡಿನೊಳಗೆ ಪರಾರಿಯಾಗಿದ್ದ ಆರೋಪಿಯನ್ನು ಚಿಕ್ಕ ಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಅವಿನಾಶ್‌(32) ಬಂಧಿತ ಆರೋಪಿ.

ಇಲ್ಲಿನ ಕೈಮರ ಚೆಕ್‌ಪೋಸ್ಟ್‌ ಬಳಿಯ ಮನೆಯಲ್ಲಿ ವಾಸವಾಗಿದ್ದ ಅವಿನಾಶ್‌-ಕೀರ್ತಿ(26)ದಂಪತಿ ಕಳೆದ 3ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಕಳೆದ 8 ದಿನ ಹಿಂದೆ ಪರಿಚಯಸ್ಥರ ಮದುವೆ ಸಮಾರಂಬಕ್ಕೆ ತೆರಳಿದ್ದರ ಬಗ್ಗೆ ನಿನ್ನೆ ಬೆಳಗ್ಗೆ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟು ಇದು ವಿಕೋಪಕ್ಕೆ ತಿರುಗಿ ಅವಿನಾಶ್‌ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಕೀರ್ತಿಯನ್ನು ಇರಿದಿದ್ದ.

ಇರಿತಕ್ಕೊಳಗಾದ ಕೀರ್ತಿ ರಕ್ತದ ಮಡುವಿನಲ್ಲೇ ಮನೆಯಿಂದ ಹೊರಗೆ ಕೂಗುತ್ತಾ ಓಡಿ ಬಂದು ನಡುರಸ್ತೆಯಲ್ಲಿ ಕೂಗಿಕೊಂಡು ಬಿದ್ದಿದ್ದಳು. ಕೂಡಲೇ ಆಕೆಯನ್ನು ಪೋಷಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು.

ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.ಈ ನಡುವೆ ಆರೋಪಿ ಅವಿನಾಶ್‌ ಸಮೀಪದ ಮುಳ್ಳಯ್ಯನಗಿರಿ ಕಾಡಿನಲ್ಲಿ ನಾಪತ್ತೆಯಾಗಿದ್ದ. ಆತನ ಬಂಧನಕ್ಕಾಗಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಗ್ರಾಮಾಂತರ ಪೊಲೀಸ್‌‍ ಇನ್ಸ್ ಪ್ಪೆಕ್ಟರ್‌ ಸಚಿನ್‌ ಹಾಗೂ ಸಬ್‌ಇನ್ಸ್ ಪ್ಪೆಕ್ಟರ್‌ ರಾಜೇಶ್‌ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.

ಮುಳ್ಳಯ್ಯನಗಿರಿ ಕಾಡಿನಲ್ಲಿ ಅವಿತು ಕೂತಿದ್ದ ವಿಷ ಕುಡಿಉದಿದ್ದ ಆರೋಪಿ ಅವಿನಾಶ್‌ನನ್ನ ತಡರಾತ್ರಿ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News