ಬೆಳಗಾವಿ, ಜೂ.18- ಐಪಿಎಸ್ ಅಧಿಕಾರಿ ರವೀಂದ್ರ ಕಾಶಪ್ಪ ಗದಾಡಿ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕು ಎಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ಅಥಣಿ ತಾಲ್ಲೂಕಿನ ವಿನೋದ ಚಕ್ರವರ್ತಿ ಎಂಬುವವರು ಸರ್ಕಾರದ ಕಾರ್ಯದರ್ಶಿಗೆ ಸುದೀರ್ಘವಾಗಿ ಆಸ್ತಿ ಸಂಪಾದನೆಯ ದಾಖಲೆಗಳ ಸಮೇತ ದೂರು ನೀಡಿದ್ದಾರೆ.ಕಳೆದ 2017ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ರವೀಂದ್ರ ಕಾಶಪ್ಪ ಅವರು ಪ್ರಸ್ತುತ ಬೆಳಗಾವಿ ವಲಯದ ಡಿಸಿಆರ್ಇ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತಮ್ಮ ಪತ್ನಿ, ಸಂಬಂಧಿಕರು ಹಾಗೂ ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ದೂರಲಾಗಿದೆ.
ಇವರ ಕುಟುಂಬ ಸದಸ್ಯರು ಸಹಕಾರ ಸಂಘವನ್ನು ಕೂಡ ಆರಂಭಿಸಿ ನಿಯಮ ಬಾಹಿರವಾಗಿ ಸಾಲ ನೀಡಿಕೆ ಹಾಗೂ ಹೂಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ಮಂಜೂರು ಮಾಡುವಂತೆ ವಿನೋದ್ ಚಕ್ರವರ್ತಿ ಮನವಿ ಮಾಡಿದ್ದಾರೆ.