Wednesday, May 1, 2024
Homeರಾಷ್ಟ್ರೀಯಶೀಘ್ರದಲ್ಲೇ ಇಂಡಿ ಮೈತ್ರಿಕೂಟ ಪತನವಾಗಲಿದೆ : ದಿಲೀಪ್ ಘೋಷ್

ಶೀಘ್ರದಲ್ಲೇ ಇಂಡಿ ಮೈತ್ರಿಕೂಟ ಪತನವಾಗಲಿದೆ : ದಿಲೀಪ್ ಘೋಷ್

ಖರಗ್‍ಪುರ,ಜ.13- ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ದಿಲೀಪ್ ಘೋಷ್ ಅವರು ಇಂಡಿಯಾ ಒಕ್ಕೂಟ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ಪ್ರತಿಪಾದಿಸಿದ್ದಾರೆ. ಇಂದು ಇಂಡಿಯಾ ಒಕ್ಕೂಟದ ನಾಯಕರ ಸಭೆ ಇಂದು ನಡೆಯಲಿರುವ ಸಂದರ್ಭದಲ್ಲೇ ಘೋಷ್ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.

ಇಂಡಿಯಾ ಮೈತ್ರಿಕೂಟವು ಸಭೆಗಳನ್ನು ಮಾತ್ರ ಮಾಡುತ್ತದೆ ಆದರೆ ಏನೂ ಆಗುವುದಿಲ್ಲ ಮತ್ತು ಶೀಘ್ರದಲ್ಲೇ ಮೈತ್ರಿ ಮುರಿದುಹೋಗುತ್ತದೆ ಎಂದು ದಿಲೀಪ್ ಘೋಷ್ ಸುದ್ದಿಗಾರರಿಗೆ ತಿಳಿಸಿದರು. ಮೈತ್ರಿಕೂಟದ ಸಂಚಾಲಕರ ಹೆಸರಿನ ಬಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ. ಮಣಿಪುರದಲ್ಲಿ ಜನವರಿ 14 ರಂದು ಆರಂಭವಾಗಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮೈತ್ರಿ ಪಕ್ಷಗಳು ಭಾಗವಹಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ಪಾಕ್ ಗೆಲುವು ಕಷ್ಟಕರವಾಗಿತ್ತು : ಆರ್ಥರ್

ಇಂದಿನ ಸಭೆಯಲ್ಲಿ ಸೀಟು ಹಂಚಿಕೆ ಮಾತುಕತೆಗಳು, ಇಂಫಾಲ್ ಬಳಿಯ ತೌಬಲ್‍ನಿಂದ ಪ್ರಾರಂಭವಾಗುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವಿಕೆಯಂತಹ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಕಾಂಗ್ರೆಸ್ ಮುಖಂಡ ಅೀಧಿರ್ ರಂಜನ್ ಚೌಧರಿ ಅವರು ಬಂಗಾಳದಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿಗೆ ತೃಣಮೂಲ ಕಾಂಗ್ರೆಸ್ ಅನ್ನು ಸಾರ್ವಜನಿಕವಾಗಿ ದೂಷಿಸಿರುವುದು ಮಮತಾ ಅವರನ್ನು ಕೆರಳಿಸಿದೆ.

ಸಂದೇಶಖಾಲಿಯಲ್ಲಿ ನಡೆದಂತಹ ಘಟನೆ ಭಾರತದಲ್ಲಿ ಎಲ್ಲಿಯೂ ನಡೆಯುವುದಿಲ್ಲ, ಪುಂಡ ಪೋಕರಿಗಳಿಗೆ ಇಂದು ಅಂತಹ ಧೈರ್ಯವಿದೆ, ಅದಕ್ಕೆ ಇದು ಒಂದು ಉದಾಹರಣೆಯಾಗಿದೆ. ಈ ಘಟನೆಯು ಬಂಗಾಳ ಆಡಳಿತ ಪಕ್ಷ ಮತ್ತು ಪೊಲೀಸ್ ಪಡೆಗಳ ನಡುವಿನ ಸಂಬಂಧವನ್ನು ಸಾಬೀತುಪಡಿಸುತ್ತದೆ. ಈ ಅಪವಿತ್ರ ಸಂಬಂಧವು ಪ್ರತಿಫಲಿಸುತ್ತದೆ. ಸಂದೇಶಖಾಲಿ ಘಟನೆ ಎಂದು ಅೀಧಿರ್ ರಂಜನ್ ಚೌಧರಿ ಜನವರಿ 6 ರಂದು ಹೇಳಿದ್ದರು.

ಹೀಗಾಗಿ ಇಂದಿನ ಸಭೆಯಲ್ಲಿ ಟಿಎಂಸಿ ನಾಯಕರು ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಒಕ್ಕೂಟದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ.

RELATED ARTICLES

Latest News