Wednesday, May 1, 2024
Homeರಾಷ್ಟ್ರೀಯಭಾರತದ ಏಕತೆಗೆ ಪಟೇಲ್ ಕೊಡುಗೆ ಅವಿಸ್ಮರಣೀಯ : ಅಮಿತ್ ಶಾ

ಭಾರತದ ಏಕತೆಗೆ ಪಟೇಲ್ ಕೊಡುಗೆ ಅವಿಸ್ಮರಣೀಯ : ಅಮಿತ್ ಶಾ

ನವದೆಹಲಿ,ಅ.31- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅವಿಸ್ಮರಣೀಯ ಕೊಡುಗೆಯಿಂದಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶವು ಒಂದುಗೂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭಾರತದ ಮೊದಲ ಗೃಹ ಸಚಿವ ಸರ್ದಾರ್ ಪಟೇಲ್ ಅವರ 148 ನೇ ಜನ್ಮದಿನಾಚರಣೆಯ ಸ್ಮರಣಾರ್ಥ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2047 ರ ವೇಳೆಗೆ ರಾಷ್ಟ್ರವನ್ನು ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವದ ಅಗ್ರಸ್ಥಾನದಲ್ಲಿ ಇರಿಸಲು ಪ್ರತಿಜ್ಞೆ ಮಾಡುವಂತೆ ಎಲ್ಲಾ ನಾಗರಿಕರಿಗೆ ಕರೆ ನೀಡಿದರು.

ಸರ್ದಾರ್ ಪಟೇಲ್ ಅವರಿಂದಾಗಿ ನಾವು ಇಂದಿನ ಭಾರತವನ್ನು ಹೊಂದಿದ್ದೇವೆ. ಅವರ ಅವಿಸ್ಮರಣೀಯ ಕೊಡುಗೆಯಿಂದಾಗಿ ಇಡೀ ದೇಶ – ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ – ಒಂದುಗೂಡಿದೆ. ಸರ್ದಾರ್ ಪಟೇಲ್ ಅವರ ಕೊಡುಗೆ ಮತ್ತು ದೂರದೃಷ್ಟಿಯಿಲ್ಲದಿದ್ದರೆ, ನಾವು ಇಂದು ಇಲ್ಲಿ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ರಾಷ್ಟ್ರ ರಾಜಧಾನಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ಏಕತೆಯ ಓಟಕ್ಕೆ ಅಮಿತ್ ಶಾ ಚಾಲನೆ ನೀಡಿದರು. ಓಟದಲ್ಲಿ 7,700 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು. ಓಟದಲ್ಲಿ ಭಾಗವಹಿಸಿದವರಲ್ಲಿ ಕ್ರೀಡಾ ಪಟುಗಳು, ಕ್ರೀಡಾ ಉತ್ಸಾಹಿಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳ ಸಿಬ್ಬಂದಿ ಸೇರಿದ್ದಾರೆ. ಅಮಿತ್ ಶಾ ಅವರು ಓಟದಲ್ಲಿ ಭಾಗವಹಿಸಿದವರಿಗೆ ಏಕತಾ ಪ್ರತಿಜ್ಞೆ ಬೋಸಿದರು.

ಧ್ವಜಾರೋಹಣ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಮೀನಕಾಶಿ ಲೇಖಿ, ನಿತ್ಯಾನಂದ ರೈ, ಅಜಯ್ ಕುಮಾರ್ ಮಿಶ್ರಾ, ನಿಸಿತ್ ಪ್ರಮಾಣಿಕ್ , ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ಇತರರು ಉಪಸ್ಥಿತರಿದ್ದರು.

ನಮ್ಮ ಭೋಜನ ಕೂಟದ ಬಗ್ಗೆ ನಿಮಗೇಕೆ ಚಿಂತೆ..? : ಪರಮೇಶ್ವರ್

ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ತನ್ನ ಸಮರ್ಪಣೆಯನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಕೇಂದ್ರ ಸರ್ಕಾರವು 2014 ರಿಂದ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿವಸï ಅಥವಾ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿದೆ. ಸರ್ದಾರ್ ಪಟೇಲ್ ಅವರು ಅಕ್ಟೋಬರ್ 31, 1875 ರಂದು ಗುಜರಾತ್‍ನ ನಾಡಿಯಾಡ್‍ನಲ್ಲಿ ಜನಿಸಿದರು. ಭಾರತದ ಮೊದಲ ಗೃಹ ಮಂತ್ರಿ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಸರ್ದಾರ್ ಪಟೇಲ್ ಅವರು 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಆಚರಣೆಯ ಅಂಗವಾಗಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಏಕೀಕೃತ ಭಾರತಕ್ಕೆ ಸರ್ದಾರ್ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತದೆ

RELATED ARTICLES

Latest News