Sunday, May 19, 2024
Homeಅಂತಾರಾಷ್ಟ್ರೀಯಪ್ರತಿ ಕ್ಷಣವೂ ಅಲರ್ಟ್ ಆಗಿರುತ್ತಿದ್ದ ಇಸ್ರೇಲ್ ಎಡವಿದ್ದೆಲ್ಲಿ..?, ಮೊಸಾದ್ ವಿಫಲವಾಗಿದ್ದೇಕೆ..?

ಪ್ರತಿ ಕ್ಷಣವೂ ಅಲರ್ಟ್ ಆಗಿರುತ್ತಿದ್ದ ಇಸ್ರೇಲ್ ಎಡವಿದ್ದೆಲ್ಲಿ..?, ಮೊಸಾದ್ ವಿಫಲವಾಗಿದ್ದೇಕೆ..?

ಟೆಲ್ ಅವಿವ್, ಅ. 10- ಗಾಜಾದಲ್ಲಿ ಇಸ್ರೇಲ್‍ನ ಹದ್ದಿನ ಕಣ್ಣುಗಳು ಎಂದಿಗೂ ಮೀರಲ್ಲ ,ಕಣ್ಗಾವಲು ಡ್ರೋನ್‍ಗಳು ಆಕಾಶದಲ್ಲಿ ನಿರಂತರವಾಗಿ ಸದ್ದು ಮಾಡುತ್ತವೆ. ಅತ್ಯಂತ ಭದ್ರತೆಯಿರುವ ಗಡಿಯಲ್ಲಿ ಭದ್ರತಾ ಕ್ಯಾಮೆರಾಗಳು ಮತ್ತು ಕಾವಲು ಸೈನಿಕರಿದ್ದಾರೆ. ಗುಪ್ತಚರ ಏಜೆನ್ಸಿಗಳು ಮಾಹಿತಿಯ ಗುಂಪು ಮತ್ತು ವಿಶ್ವದ ಆಧುನಿಕ ಸೈಬರ್ ಸಾಮಥ್ರ್ಯವಿದ್ದರೂ ಅಡೆತಡೆಗಳನ್ನು ಮುರಿದು ನೂರಾರು ಉಗ್ರಗಾಮಿಗಳು ನುಗ್ಗಿ ನೂರಾರು ಜನರನ್ನು ಕೊಂದಿದ್ದು ಹೇಗೆ..? ತಪ್ಪು ಎಲ್ಲಾಯಿತು ಎಂಬ ಪ್ರಶ್ನೆ ಕಾಡಿದೆ.

ಇಸ್ರೇಲಿ ಗಡಿ ಅಡೆತಡೆಗಳನ್ನು ಮುರಿದು ನೂರಾರು ಉಗ್ರಗಾಮಿಗಳನ್ನು ಹಲವರು ಜನರನ್ನು ಕೊಂದಿದ್ದಾರೆ. ಇಸ್ರೇಲ್‍ನ ಗುಪ್ತಚರ ಏಜೆನ್ಸಿಗಳು ಹಲವಾರು ಸಾಧನೆಗಳನ್ನು ವಿಫಲಗೊಳಿಸಿ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ದುಬೈನಲ್ಲಿ ಹಮಾಸ್ ಕಾರ್ಯಕರ್ತರನ್ನು ಕೊಂದು ಮತ್ತು ಇರಾನ್‍ನ ಹೃದಯಭಾಗದಲ್ಲಿ ಇರಾನ್ ಪರಮಾಣು ವಿಜ್ಞಾನಿಗಳನ್ನು ಕೊಂದಿದೆ ಎಂಬ ಆರೋಪ ಇಸ್ರೇಲ್ ಮೊಸಾದ್ ಗುಪ್ತಚರ ಸಂಸ್ಥೆ ಮೇಲಿದೆ. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಿದೆಯೇ?

ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳ ಜಾಹಿರಾತು ಮಾಡಲ್ಲ : ಅಕ್ಷಯ್ ಕುಮಾರ್

ಪ್ರಸ್ತುತ ಆಕ್ರಮಣದಲ್ಲಿ ಇಸ್ರೇಲ್‍ನ ಕಾವಲುಗಾರನನ್ನು ಹಿಡಿದಿಟ್ಟುಕೊಂಡಿತು. 24 ಗಂಟೆಗಳ ನಂತರ, ಹಮಾಸ್ ಉಗ್ರಗಾಮಿಗಳು ಇಸ್ರೇಲಿ ಪಡೆಗಳೊಂದಿಗೆ ಯುದ್ಧವನ್ನು ಮುಂದುವರೆದಿದೆ. ಇದು ದೊಡ್ಡ ಭದ್ರತಾ ವೈಫಲ್ಯವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾಕೋವ್ ಅಮಿಡ್ರೋರ್ ಹೇಳಿದ್ದಾರೆ.

ಈ ಕಾರ್ಯಾಚರಣೆಯು ವಾಸ್ತವವಾಗಿ ಗಾಜಾದಲ್ಲಿ (ಗುಪ್ತಚರ) ಸಾಮಥ್ರ್ಯಗಳು ಉತ್ತಮವಾಗಿಲ್ಲ ಎಂದು ಸಾಬೀತುಪಡಿಸುತ್ತದೆ ಎಂದಿದ್ದಾರೆ. ಮುಖ್ಯ ಸೇನಾ ವಕ್ತಾರರಾದ ರಿಯರ್ ಅಡ್ಮಿ ಡೇನಿಯಲ್ ಹಗರಿ ಹೇಳಿದ್ದಾರೆ. ಸೇನೆಯು ಸಾರ್ವಜನಿಕರಿಗೆ ವಿವರಣೆ ನೀಡಬೇಕಿದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈಗ ಅದಕ್ಕೆ ಸಮಯವಿಲ್ಲ, ಮೊದಲು ಹೋರಾಟ ಮಾಡಿ ನಂತರ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

ಕಳೆದ 15 ವರ್ಷದಲ್ಲಿ ಗಾಜಾ ಪಟ್ಟಿಯಲ್ಲಿ ಹಲವಾರು ಬಾರಿ ದಾಳಿ ನಡೆದಿದೆ. ಹಲವರು ಹತರಾಗಿದ್ದಾರೆ. ಆದರೆ, ದೇಶದ ಒಂದಿಂಚೂ ಜಾಗವನ್ನೂ ಬಿಟ್ಟುಕೊಡದೆ ಯಶಸ್ವಿಯಾಗಿ ಹಮಾಸ್ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ. ಆದರೆ, ಈಗ ಅವರು ಯಾವುದೇ ಅಂಜಿಕೆ ಇಲ್ಲದೆ ಪ್ಯಾರಾಚೂಟ್‍ಗಳು ಹಾಗೂ ವಿವಿಧ ಕಾರು ಹಾಗೂ ಹಡಗುಗಳಲ್ಲಿ ದಕ್ಷಿಣ ಭಾಗದ ಇಸ್ರೇಲ್ ಮೇಲೆ ದಾಳಿ ನಡೆಸಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಮಿಡ್ರೋರ್ ಹೇಳಿದ್ದಾರೆ.

ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್‍ಇಟಿ ಉಗ್ರರು ಹತ್ಯೆ

ಇದನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ. ಇದರ ಹಿಂದೆ ಏನಾದರೂ ರಾಜಕೀಯ ದುರುದ್ದೇಶವಿದೆಯೇ ಎಂಬುದು ಕೂಡ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

RELATED ARTICLES

Latest News