Wednesday, May 1, 2024
Homeರಾಷ್ಟ್ರೀಯಜಾರ್ಖಂಡ್‍ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ : ಮರಾಂಡಿ

ಜಾರ್ಖಂಡ್‍ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ : ಮರಾಂಡಿ

ಧನ್‍ಬಾದ್, ಡಿ 3 (ಪಿಟಿಐ) ಹೇಮಂತ್ ಸೊರೇನ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಆರೋಪಿಸಿದ್ದಾರೆ.ಇಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮರಾಂಡಿ ಈ ವಿಷಯ ತಿಳಿಸಿದರು.

ಕ್ರಿಮಿನಲ್‍ಗಳು, ಕಲ್ಲಿದ್ದಲು ಕಳ್ಳರು ಮತ್ತು ಪೊಲೀಸರ ನಡುವಿನ ನಂಟು ಜಾರ್ಖಂಡ್‍ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಶ್ರ್ವವಾಯುವಿಗೆ ತಂದಿದೆ. ಕಲ್ಲಿದ್ದಲು ಬೆಲ್ಟ ಧನ್‍ಬಾದ್‍ನಲ್ಲಿನ ಸಂಪೂರ್ಣ ಯಂತ್ರಗಳು ಕಲ್ಲಿದ್ದಲು ಕಳ್ಳತನದಲ್ಲಿ ತೊಡಗಿವೆ ಮತ್ತು ಅದರ ಪಾಲು ನೇರವಾಗಿ ಮುಖ್ಯಮಂತ್ರಿಗೆ ಹೋಗುತ್ತದೆ ಎಂದು ಅವರು ಆರೋಪಿಸಿದರು.

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (LIVE UPDATES)

ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರಿ ನಿರ್ದೇಶನಾಲಯದಿಂದ (ಇಡಿ) ಓಡಿಹೋಗುತ್ತಿದ್ದಾರೆ ಎಂದು ಮರಾಂಡಿ ಆರೋಪಿಸಿದ್ದಾರೆ. ಸಿಎಂ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಇಡಿಯಿಂದ ಏಕೆ ಓಡಿ ಹೋಗುತ್ತಿದ್ದಾರೆ, ಅವರು ಶುದ್ಧರಾಗಿದ್ದು, ಯಾವುದೇ ಕಾಳಿ ಕಮೈ (ಕಪ್ಪುಹಣ) ಸಂಪಾದಿಸದಿದ್ದರೆ ಇಡಿಯನ್ನು ದಿಟ್ಟತನದಿಂದ ಎದುರಿಸಬೇಕು ಎಂದು ಮರಾಂಡಿ ಹೇಳಿದರು.

ಜಾರ್ಖಂಡ್‍ನಲ್ಲಿ ಅಪರಾಧ ಮತ್ತು ನಿರುದ್ಯೋಗವು ಉತ್ತುಂಗದಲ್ಲಿದೆ. ರಾಜ್ಯದ ಯುವಕರ ವಲಸೆ ಮುಂದುವರೆದಿದೆ. ಉದ್ಯೋಗದ ಕಳಪೆ ಸ್ಥಿತಿಯಿಂದಾಗಿ, ಉದ್ಯೋಗಕ್ಕಾಗಿ ಉತ್ತರಾಖಂಡಕ್ಕೆ ತೆರಳಿದ್ದ ಜಾರ್ಖಂಡ್‍ನ 15 ಕಾರ್ಮಿಕರು ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು. ಧನ್‍ಬಾದ್‍ನಲ್ಲಿ ಸುಲಿಗೆ ಹೆಚ್ಚುತ್ತಿದೆ ಎಂದು ಧನಬಾದ್ ಸದರ್ ಬಿಜೆಪಿ ಶಾಸಕ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಕಲ್ಲಿದ್ದಲು ಲೂಟಿಯ ಬಗ್ಗೆ ಸಂಸದ ಪಿಎನ್ ಸಿಂಗ್ ಕಳವಳ ವ್ಯಕ್ತಪಡಿಸಿದರು.

RELATED ARTICLES

Latest News