Sunday, February 23, 2025
Homeರಾಷ್ಟ್ರೀಯ | Nationalಭಾಷೆಗಾಗಿ ಪ್ರಾಣ ಕೊಡಲು ಸಿದ್ದರಿರುವ ತಮಿಳು ಮಕ್ಕಳ ಜೊತೆ ಆಟವಾಡಬೇಡಿ : ಕಮಲ್ ಹಾಸನ್

ಭಾಷೆಗಾಗಿ ಪ್ರಾಣ ಕೊಡಲು ಸಿದ್ದರಿರುವ ತಮಿಳು ಮಕ್ಕಳ ಜೊತೆ ಆಟವಾಡಬೇಡಿ : ಕಮಲ್ ಹಾಸನ್

Kamal Haasan's 'don't play' warning amid Centre-Tamil Nadu's language row

ನವದೆಹಲಿ, ಫೆ. 22- ಭಾಷೆಗಾಗಿ ತಮ್ಮ ಪ್ರಾಣ ಕೊಡಲು ಸಿದ್ದರಿರುವ ತಮಿಳು ಮಕ್ಕಳ ಜೊತೆ ಆಟವಾಡಬೇಡಿ ಎಂದು ಖ್ಯಾತ ಚಲನಚಿತ್ರ ನಟ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ. ತಮಿಳರ ಭಾಷೆಯ ಮಹತ್ವವನ್ನು ಒತ್ತಿಹೇಳಿದ ಅವರು ಅಂತಹ ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ರಾಜ್ಯದಲ್ಲಿ ಕೇಂದ್ರ ಮತ್ತು ಎಂ.ಕೆ.ಸ್ಟಾಲಿನ್ ಅವರ ಡಿಎಂಕೆ ಸರ್ಕಾರದ ನಡುವೆ ನಡೆಯುತ್ತಿರುವ ಭಾಷಾ ವಿವಾದದ ಮಧ್ಯೆ ಅವರ ಹೇಳಿಕೆ ಬಂದಿರುವುದು ವಿಶೇಷವಾಗಿದೆ.
ಒಂದು ಭಾಷೆಗಾಗಿ ತಮಿಳರು ಪ್ರಾಣ ಕಳೆದುಕೊಂಡಿದ್ದಾರೆ.

ಆ ವಸ್ತುಗಳೊಂದಿಗೆ ಆಟವಾಡಬೇಡಿ. ತಮಿಳರಿಗೆ, ಮಕ್ಕಳಿಗೂ ಸಹ ತಮಗೆ ಯಾವ ಭಾಷೆ ಬೇಕು ಎಂದು ತಿಳಿದಿದೆ. ಅವರಿಗೆ ಯಾವ ಭಾಷೆ ಬೇಕು ಎಂಬುದನ್ನು ಆಯ್ಕೆ ಮಾಡುವ ಜ್ಞಾನವಿದೆ ಎಂದು ಕಮಲ್ ಹಾಸನ್ ತಮ್ಮ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷದ 8 ನೇ ಸಂಸ್ಥಾಪನಾ ದಿನದಂದು ಮಾಡಿದ ಭಾಷಣದಲ್ಲಿ ಹೇಳಿದರು.

ಹಿಂದಿಯನ್ನು ಒಳಗೊಂಡ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತಮಿಳುನಾಡಿನಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರಲು ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ ಬಗ್ಗೆ ಬಿಜೆಪಿ ಮತ್ತು ಡಿಎಂಕೆ ನಡುವೆ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಕಮಲ್ ಹಾಸನ್ ಅವರ ಎಂಎನ್‌ಎಂ 2024 ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಬಣವನ್ನು ಬೆಂಬಲಿಸಿತ್ತು.

RELATED ARTICLES

Latest News