Tuesday, July 2, 2024
Homeರಾಷ್ಟ್ರೀಯಕೇದಾರನಾಥಗೆ ತೆರಳುತ್ತಿದ್ದ ಹೆಲಿಕಾಫ್ಟರ್‌ ತುರ್ತು ಭೂಸ್ಪರ್ಶ, ಪ್ರಯಾಣಿಕರು ಸೇಫ್

ಕೇದಾರನಾಥಗೆ ತೆರಳುತ್ತಿದ್ದ ಹೆಲಿಕಾಫ್ಟರ್‌ ತುರ್ತು ಭೂಸ್ಪರ್ಶ, ಪ್ರಯಾಣಿಕರು ಸೇಫ್

ಕೇದಾರನಾಥ,ಮೇ.24- ಕೇದಾರನಾಥ ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್‌ ದೂರದಲ್ಲಿ ತಾಂತ್ರಿಕ ದೋಷದಿಂದ 7 ಮಂದಿಯನ್ನು ಹೊತ್ತೊಯುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದೆ.ಎಲ್ಲಾ 6 ಪ್ರಯಾಣಿಕರು ಮತ್ತು ಪೈಲಟ್‌ ಸುರಕ್ಷಿತವಾಗಿದ್ದಾರೆ.

ಸಿರ್ಸಿ ಹೆಲಿಪ್ಯಾಡ್‌ನಿಂದ ಕೇದಾರನಾಥ ಧಾಮಕ್ಕೆ ಪೈಲಟ್‌ನೊಂದಿಗೆ 6 ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಕೆಸ್ಟ್ರೆಲ್‌ ಏವಿಯೇಷನ್‌ನ ಹೆಲಿಕಾಪ್ಟರ್‌ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.

ಈ ವರ್ಷ ಚಾರ್‌ ಧಾಮ್‌ ಯಾತ್ರೆಯು ಮೇ 10 ರಂದು ಪ್ರಾರಂಭವಾಯಿತು, ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಸೇರಿದಂತೆ ಮೂರು ನಾಲ್ಕು ದೇವಾಲಯಗಳನ್ನು ತೆರೆಯಲಾಯಿತು. ಮೇ 12 ರಂದು ಬದರಿನಾಥದ ಬಾಗಿಲು ತೆರೆಯಲಾಗಿತ್ತು.

ಚಾರ್‌ ಧಾಮ್‌ ಯಾತ್ರೆಯು ಹಿಂದೂ ಧರ್ಮದಲ್ಲಿ ಆಳವಾದ ಆಧ್ಯಾತಿಕ ಮಹತ್ವವನ್ನು ಹೊಂದಿದೆ. ಈ ಪ್ರಯಾಣವು ಸಾಮಾನ್ಯವಾಗಿ ಏಪ್ರಿಲ್‌‍-ಮೇ ನಿಂದ ಅಕ್ಟೋಬರ್‌ ಮತ್ತು ನವೆಂಬರ್‌ ವರೆಗೆ ಮುಂದುವರೆಯುತ್ತದೆ.ಚಾರ್‌ ಧಾಮ್‌ ಯಾತ್ರೆಯನ್ನು ಪ್ರದಕ್ಷಿಣಾಕಾರವಾಗಿ ಪೂರ್ಣಗೊಳಿಸಬೇಕು ಎಂದು ನಂಬಲಾಗಿದೆ.

ಆದ್ದರಿಂದ, ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ, ಗಂಗೋತ್ರಿ ಕಡೆಗೆ ಸಾಗುತ್ತದೆ, ಕೇದಾರನಾಥಕ್ಕೆ, ಮತ್ತು ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ. ಯಾತ್ರಿಕರ ವಿಪರೀತ ನೂಕುನುಗ್ಗಲು ಕಾರಣ, ಉತ್ತರಾಖಂಡ ಸರ್ಕಾರವು ಚಾರ್ಧಾಮ್‌ ಯಾತ್ರೆಗೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸಿದೆ.

ಕಾಮೆಂಟ್‌ ಪೋಸ್ಟ್‌‍ ಮಾಡಿ
ಹರಿದ್ವಾರ ಮತ್ತು ಋಷಿಕೇಶದಲ್ಲಿ ಆಫ್‌ಲೈನ್‌ ನೋಂದಣಿಯನ್ನು ನಿಲ್ಲಿಸಲಾಗಿದ್ದು, ಈಗ ಭಕ್ತರು ಆನ್‌ಲೈನ್‌ ನೋಂದಣಿ ನಂತರವೇ ಚಾರ್ಧಾಮ್‌ ಯಾತ್ರೆಗೆ ಬರಬಹುದು.

RELATED ARTICLES

Latest News