Sunday, May 5, 2024
Homeಅಂತಾರಾಷ್ಟ್ರೀಯಮಾಲ್ಡೀವ್ಸ್ ಪ್ರಾಸಿಕ್ಯೂಟರ್ ಜನರಲ್‌ಗೆ ಇರಿತ

ಮಾಲ್ಡೀವ್ಸ್ ಪ್ರಾಸಿಕ್ಯೂಟರ್ ಜನರಲ್‌ಗೆ ಇರಿತ

ನವದೆಹಲಿ,ಜ.31- ಹಿಂದಿನ ಸರಕಾರದಿಂದ ನೇಮಕಗೊಂಡಿದ್ದ ಮಾಲ್ಡೀವ್ಸ್ ನ ಪ್ರಾಸಿಕ್ಯೂಟರ್ ಜನರಲ್ ಹುಸೇನ್ ಶಮೀಮ್ ಅವರನ್ನು ಇಂದು ಬರ್ಬರವಾಗಿ ಇರಿದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಮೀಮ್ ಅವರನ್ನು ಇಬ್ರಾಹಿಂ ಮೊಹಮ್ಮದ್ ಸೋಲಿಹ್ ನೇತೃತ್ವದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸರ್ಕಾರ ನೇಮಿಸಿತು. ಪ್ರಸ್ತುತ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಎಂಡಿಪಿ ಇತ್ತೀಚೆಗೆ ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿತ್ತು.

ಇಂದು ಮುಂಜಾನೆ ಹಲ್ಲೆ ನಡೆದಿದ್ದು, ಶಮೀಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಪ್ರಸ್ತುತ ಅವರು ಎಡಿಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾಸಿಕ್ಯೂಟರ್ ಕಚೇರಿಯ ಅಧಿಕಾರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.ಶಮೀಮ್ ಮೇಲೆ ಮುಂಜಾನೆ ದಾಳಿ ನಡೆದಿದೆ. ಪ್ರಾಸಿಕ್ಯೂಟರ್ ಹುಸೇನ್ ಶಮೀಮ್ ಮೇಲೆ ನಗರದ ಬೀದಿಗಳಲ್ಲಿ ಹಲ್ಲೆ ನಡೆಸಲಾಗಿದೆ. ಅವರಿಗೆ ಎಡಿಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹರಿತವಾದ ವಸ್ತುವಿನಿಂದ ದಾಳಿ ನಡೆಸಲಾಗಿಲ್ಲ ಎಂದು ಮಾಲ್ಡೀವ್ಸ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆಯು ದ್ವೀಪ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಬಂದಿದೆ, ಮುಯಿಝು ಸರ್ಕಾರಕ್ಕೆ ಸಂಸತ್ತಿನ ಅನುಮೋದನೆಯ ಮೇಲೆ ನಿರ್ಣಾಯಕ ಮತದಾನದ ಸಂದರ್ಭದಲ್ಲಿ ಮಾಲ್ಡೀವಿಯನ್ ಸಂಸತ್ತಿನಲ್ಲಿ ಇತ್ತೀಚಿನ ಗೊಂದಲಗಳು ಕಂಡುಬಂದವು. ಪ್ರತಿಪಕ್ಷಗಳ ಸದಸ್ಯರು ಅವೇಶನಕ್ಕೆ ಅಡ್ಡಿಪಡಿಸಿದಾಗ ಸಂಸತ್ತಿನ ಕಲಾಪದಲ್ಲಿ ಉದ್ವಿಗ್ನತೆ ಉಂಟಾದಾಗ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಾಟಕೀಯ ದೃಶ್ಯಗಳು ಎಂಡಿಪಿ ಸಂಸದ ಇಸಾ ಮತ್ತು ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‍ಸಿ) ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್ ನಡುವೆ ದೈಹಿಕ ಕುಸ್ತಿ ನಡೆದಿತ್ತು.

ವಿರೋಧ ಪಕ್ಷವು ಅಧ್ಯಕ್ಷ ಮುಯಿಝು ಅವರು ಚೀನಾ ಪರವಾದ ನಿಲುವನ್ನು ಹೊಂದಿದ್ದಾರೆ. ವಿಶೇಷವಾಗಿ ಅದರ ರಾಜಧಾನಿ ಮಾಲೆಯಲ್ಲಿ ಚೀನಾದ ಬೇಹುಗಾರಿಕಾ ಹಡಗನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಂಸತ್ತಿನಲ್ಲಿ ಗದ್ದಲ ನಡೆಸಿತ್ತು.

ಮಾಲ್ಡೀವಿಯನ್ ವಿರೋಧ ಪಕ್ಷಗಳು ಜಂಟಿಯಾಗಿ ಪ್ರಸ್ತುತ ಆಡಳಿತದ ಭಾರತ ವಿರೋ ಪಿವೋಟ್ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ವಿದೇಶಾಂಗ ನೀತಿಯ ಬದಲಾವಣೆಯು ದೇಶದ ದೀರ್ಘಾವಯ ಅಭಿವೃದ್ಧಿಗೆ ಅತ್ಯಂತ ಹಾನಿಕಾರಕ ಎಂದು ಟೀಕಿಸಿದರು. ಹಿಂದೂ ಮಹಾಸಾಗರದಲ್ಲಿ ಮಾಲ್ಡೀವ್ಸ್‍ನ ಸ್ಥಿರತೆ ಮತ್ತು ಭದ್ರತೆಗಾಗಿ ಎಲ್ಲಾ ಅಭಿವೃದ್ಧಿ ಪಾಲುದಾರರೊಂದಿಗೆ, ವಿಶೇಷವಾಗಿ ದೇಶದ ದೀರ್ಘಕಾಲದ ಮಿತ್ರರೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ವಿರೋಧವು ಒತ್ತಿಹೇಳಿತು.

ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ಔಪಚಾರಿಕವಾಗಿ ಕ್ಷಮೆಯಾಚಿಸಬೇಕು ಎಂದು ಅಧ್ಯಕ್ಷ ಮುಯಿಝು ಅವರನ್ನು ಒತ್ತಾಯಿಸಿದ್ದರು.

RELATED ARTICLES

Latest News