Sunday, April 28, 2024
Homeರಾಷ್ಟ್ರೀಯಬಿಜೆಪಿಯ ಸುಳ್ಳುಗಳು ಪ್ರಬಲವಾಗಿವೆ : ಖರ್ಗೆ

ಬಿಜೆಪಿಯ ಸುಳ್ಳುಗಳು ಪ್ರಬಲವಾಗಿವೆ : ಖರ್ಗೆ

ನವದೆಹಲಿ, ಡಿ 31 (ಪಿಟಿಐ) – 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದು, ಬಿಜೆಪಿಯ ಸುಳ್ಳುಗಳು ಪ್ರಬಲವಾಗಿವೆ ಎಂದು ಆರೋಪಿಸಿದ್ದಾರೆ.

ಎಕ್ಸ್‍ನಲ್ಲಿ ಹಿಂದಿಯಲ್ಲಿ ಬರೆದಿರುವ ಪೋಸ್ಟ್‍ನಲ್ಲಿ ಖರ್ಗೆ ಅವರು, ನರೇಂದ್ರ ಮೋದಿ ಜಿ, ಇಂದು 2023 ರ ಕೊನೆಯ ದಿನ. ನೀವು 2022 ರವರೆಗೆ ಪ್ರತಿ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಹೇಳಿದ್ದೀರಿ. ಪ್ರತಿಯೊಬ್ಬ ಭಾರತೀಯನಿಗೆ ಮನೆ ಮತ್ತು ದಿನದ 24 ಗಂಟೆ ವಿದ್ಯುತ್ ಇರುತ್ತದೆ. ಆರ್ಥಿಕತೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿ ಪರಿವರ್ತನೆಯಾಗಲಿದೆ ಎಂದು ಭರವಸೆ ನೀಡಿದ್ದೀರಾ ಆದರೆ, ಇದೆಲ್ಲ ನಡೆಯಲಿಲ್ಲ ಬಿಜೆಪಿಯ ಸುಳ್ಳುಗಳು ಅತ್ಯಂತ ಪ್ರಬಲವೆಂದು ಪ್ರತಿಯೊಬ್ಬ ಭಾರತೀಯರಿಗೂ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು

ಆರ್ಥಿಕತೆ ಮತ್ತು ರೈತರ ಬಗ್ಗೆ ಅದರ ನೀತಿಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ದಶವಾರ್ಷಿಕ ಜನಗಣತಿ ನಡೆಸದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜನಗಣತಿ ವಿಳಂಬದ ಕುರಿತು ಪೋಸ್ಟ್‍ಗೆ ಪ್ರತಿಕ್ರಿಯಿಸಿದ ರಮೇಶ್, 2021 ಕ್ಕೆ ಕೊನೆಯದಾಗಿ ದಶವಾರ್ಷಿಕ ಜನಗಣತಿಯನ್ನು ನಡೆಸುವಲ್ಲಿನ ಅತಿಯಾದ ವಿಳಂಬವು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ಕೇವಲ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದೆ ಅಲ್ಲ. ನಿಸ್ಸಂದೇಹವಾಗಿ ಇದರ ಹಿಂದೆ ಹುನ್ನಾರವಿದೆ ಎಂದಿದ್ದಾರೆ.

RELATED ARTICLES

Latest News