Wednesday, March 26, 2025
Homeರಾಜ್ಯಮಂಗಳೂರು : ರೆಸಾರ್ಟ್‌ ಈಜುಕೊಳದಲ್ಲಿ ಯುವಕ ದುರಂತ ಸಾವು

ಮಂಗಳೂರು : ರೆಸಾರ್ಟ್‌ ಈಜುಕೊಳದಲ್ಲಿ ಯುವಕ ದುರಂತ ಸಾವು

Mangaluru: Youth dies tragically in resort swimming pool

ಮಂಗಳೂರು, ಮಾ.24- ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ತಾನು ತಂಗಿದ್ದ ಖಾಸಗಿ ರೆಸಾರ್ಟ್‌ ಈಜುಕೊಳದಲ್ಲಿ ದುರ್ಮರಣ ಹೊಂದಿದ್ದಾರೆ. ಮಡಿಕೇರಿ ಕುಶಾಲನಗರ ಮೂಲದ ನಿಶಾಂತ್‌(35) ಮೃತ ದುರ್ದೈವಿ.

ಕುಶಾಲನಗರದಲ್ಲಿ ಮೊಬೈಲ್‌ ಗ್ಯಾಲರಿ ಶಾಪ್‌ ಮಾಲೀಕರಾಗಿರುವ ನಿಶಾಂತ್‌ ಪ್ರವಾಸಕ್ಕೆಂದು ಮಂಗಳೂರಿಗೆ ಸ್ನೇಹಿತನ ಜೊತೆ ಆಗಮಿಸಿ ರೆಸಾರ್ಟ್‌ನಲ್ಲಿ ತಂಗಿದ್ದರು.ಈಜುಕೊಳದಲ್ಲಿ ನೀರಿಗೆ ಹಾರಿದಾಗ ತಲೆ ಹಾಗು ಬೆನ್ನಿಗೆ ಪೆಟ್ಟಾಗಿದೆ ನಂತರ ನಿಶಾಂತ್‌ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ನೀರಿನಿಂದ ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಅಸ್ವಸ್ಥಗೊಂಡಿದ್ದಾರೆ.ನಂತರ ಆಸ್ಪತ್ರೆಗೆ ಕರೆದೊಯ್ಯಾಲಾಯಿತು ಆದರೂ ಜೀವ ಉಳಿಯಲಿಲ್ಲ ಎನ್ನಲಾಗಿದೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ.ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ನೇಹಿತರ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಂಗಳೂರು ಹೊರವಲಯದ ಉಚ್ಚಿಲ ಬೀಚ್‌ ಬಳಿಯ ಖಾಸಗಿ ಬೀಚ್‌ ರೆಸಾರ್ಟ್‌ನಲ್ಲಿ ಇದೇ ರೀತಿ ಮೂವರು ಯುವತಿಯರು ಈಜುಕೊಳದಲ್ಲಿ ಮೃತಪಟ್ಟ ಘಟನೆ ಕಳೆದ ನವೆಂಬರ್‌ನಲ್ಲಿ ಸಂಭವಿಸಿತ್ತು.

RELATED ARTICLES

Latest News