Saturday, June 7, 2025
Homeರಾಜ್ಯಮಾವಿನ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲು

ಮಾವಿನ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲು

Mango Growers in distress due to fall in price

ಚೇಳೂರು, ಮೇ 30- ಇತಿಹಾಸ ಪ್ರಸಿದ್ಧ ಚೇಳೂರು ತೆಂಗು ಅಡಿಕೆ ಮಾವು ಹಾಗೂ ಹಲಸಿಗೆ ರಾಜ್ಯದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಈ ವರ್ಷ ಮಾವು ಹಾಗು ಹಲಸು ಬೆಳಗಾರರಿಗೆ ದಿನೇ ದಿನೇ ಬೆಲೆ ಕುಸಿತದಿಂದ ಮಾವು ಬೆಳೆಗಾರರು ತೀವ್ರ ಕಂಗಾಲಾಗಿದ್ದಾರೆ.

ಚೇಳೂರು ಮಾರುಕಟ್ಟೆಗೆ ಸಾವಿರಾರು ರೈತರು ಮಾವನ್ನು ತಂದರೂ ಕೊಳ್ಳುವವರು ಇಲ್ಲದೆ, ಹೊರಗಿನ ವ್ಯಾಪಾರಿಗಳು ಬಾರದ ಕಾರಣ ಮಾವಿನಕಾಯಿ ಕೊಳೆತು ನಾರ್ವ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಮಾವಿನಕಾಯಿಗಳನ್ನು ಮರದಲ್ಲೇ ಬಿಟ್ಟು ಮರದಲ್ಲಿ ಮಾವಿನಕಾಯಿ ಹಣ್ಣಾಗಿ ಸುರಿಯುತ್ತಿದೆ.

ಮಾರುಕಟ್ಟೆಗೆ ಮಾರಾಟ ಮಾಡಲು ತಂದರೆ ಕೊಳ್ಳುವವ ಇಲ್ಲದೆ ಚರಂಡಿ ರಸ್ತೆ ಬದಿ ಹೊಲಗಳಲ್ಲಿ ನೋಡುಗಟ್ಟರೆ ಮಾವಿನ ಕಾಯಿಗಳನ್ನು ಸುರಿತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಹಾಗೂ ಮಾವಿನಕಾಯಿ ವ್ಯಾಪಾರಿ ರಾಘವೇಂದ್ರ ರಾವ್‌ , ರೈತರ ಪರಿಸ್ಥಿತಿ ಗಂಭೀರವಾಗಿದೆ, ಮಾವಿನಕಾಯಿಗಳನ್ನು ತಂದರೆ ಹೊರಗಡೆಯಿಂದ ಬಂದಕೊಳ್ಳುವವರಿಲ್ಲ ತಕ್ಷಣ ಸರ್ಕಾರ ಮಾವು ಬೆಳಗಾರರ ಬೆಂಬಲಕ್ಕೆ ನಿಂತು ಪ್ರೋತ್ಸಾಹ ಧನ ಹಾಗೂ ಪರಿಹಾರ ನೀಡಬೇಕಾಗಿ ಒತ್ತಾಯಿಸಿದರು. ರೈತರ ಪರವಾಗಿ ಮಾವಿನ ಮಂಡಿಗಳನ್ನು ಮುಚ್ಚಿ ಎರಡು ದಿನ ಪ್ರತಿಭಟಿಸುವುದಾಗಿ ತಿಳಿಸಿದರು.

ಮತೊಬ್ಬ ವ್ಯಾಪಾರಿ ಚಂದ್ರಶೇಖರ್‌ ಬಾಬು ಮಾತನಾಡಿ, ಚೇಳೂರು ಮಾರುಕಟ್ಟೆಯಲ್ಲಿ 25 ವರ್ಷಗಳಿಂದ ಮಾವಿನಕಾಯಿ ವ್ಯಾಪಾರ ಮಾಡುತ್ತಿದ್ದಾನೆ. ಈ ವರ್ಷ ಸಂಪೂರ್ಣವಾಗಿ ಮಾವಿನ ಬೆಲೆ ಕುಸಿದಿದೆ ಮಾವು ಬೆಳೆಗಾರರಿಗೆ ಪರಿಹಾರ ನಡೆದಿದ್ದರೆ ಅವರ ಕುಟುಂಬ ಬೀದಿ ಪಾಲಾಗುತ್ತದೆ ಎಂದು ತಿಳಿಸಿದರು. ಒಟ್ಟಾರೆ ಮಾವಿನಕಾಯಿ ಕೊಳ್ಳುವವರಿಲ್ಲದ ಕಾರಣ ರೈತರ ವ್ಯಾಪಾರಿಗಳ ಸ್ಥಿತಿ ಗಂಭೀರವಾಗಿದೆ.

RELATED ARTICLES

Latest News