Wednesday, April 30, 2025
Homeರಾಷ್ಟ್ರೀಯ | Nationalಪಹಲ್ಗಾಮ್‌ ಉಗ್ರರ ದಾಳಿ ವಿರುದ್ಧ ರಾಜಕೀಯ ಐಕ್ಯತೆಗೆ ಮಾಯವತಿ ಕರೆ

ಪಹಲ್ಗಾಮ್‌ ಉಗ್ರರ ದಾಳಿ ವಿರುದ್ಧ ರಾಜಕೀಯ ಐಕ್ಯತೆಗೆ ಮಾಯವತಿ ಕರೆ

Mayawati calls for political unity against Pahalgam terror attack

ಲಕ್ನೋ, ಏ. 30: ಪಹಲ್ಗಾಮ್‌ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ರಾಜಕೀಯ ಐಕ್ಯತೆಗೆ ಬಿಎಸ್‌‍ಪಿ ಮುಖ್ಯಸ್ಥೆ ಮಾಯಾವತಿ ಕರೆ ನೀಡಿದ್ದಾರೆ. ರಾಜಕೀಯ ಪಾಯಿಂಟ್‌ ಸ್ಕೋರಿಂಗ್‌ ನಲ್ಲಿ ತೊಡಗುವ ಬದಲು ಸರ್ಕಾರದ ಕ್ರಮಗಳನ್ನು ಬೆಂಬಲಿಸುವಂತೆ ಎಲ್ಲಾ ಪಕ್ಷಗಳನ್ನು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಏಪ್ರಿಲ್‌ 22 ರಂದು ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣದಲ್ಲಿ ಕೆಲವು ಭಯೋತ್ಪಾದಕರು ಗುಂಡು ಹಾರಿಸಿದಾಗ 26 ಜನರು ಸಾವನ್ನಪ್ಪಿದ್ದರು.ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಯಾವತಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಸರ್ಕಾರದೊಂದಿಗೆ ನಿಲ್ಲಬೇಕು ಎಂದಿದ್ದಾರೆ.

ಕ್ಷುಲ್ಲಕ ರಾಜಕೀಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಪೋಸ್ಟರ್‌ಗಳು ಅಥವಾ ಹೇಳಿಕೆಗಳಿಗೆ ಇದು ಸಮಯವಲ್ಲ, ಏಕೆಂದರೆ ಅಂತಹ ಕ್ರಮಗಳು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆ, ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ನಂತರದ ಪೋಸ್ಟ್‌ನಲ್ಲಿ, ಬಿಎಸ್ಪಿ ಮುಖ್ಯಸ್ಥೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರನ್ನು ಈ ವಿಷಯದ ಸುತ್ತಲಿನ ರಾಜಕೀಯ ಚರ್ಚೆಯಲ್ಲಿ ಎಳೆಯದಂತೆ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.

RELATED ARTICLES

Latest News