Saturday, July 27, 2024
Homeಇದೀಗ ಬಂದ ಸುದ್ದಿಸಂಭ್ರಮಾಚರಣೆ ಮಾಡದಂತೆ ಶಾಸಕ ಹೆಚ್‌.ಡಿ.ರೇವಣ್ಣ ಮನವಿ

ಸಂಭ್ರಮಾಚರಣೆ ಮಾಡದಂತೆ ಶಾಸಕ ಹೆಚ್‌.ಡಿ.ರೇವಣ್ಣ ಮನವಿ

ಬೆಂಗಳೂರು, ಮೇ 15-ಸಂಭ್ರಮಾಚರಣೆ ಮಾಡದಂತೆ ಜೆಡಿಎಸ್‌‍ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹೆಚ್‌.ಡಿ.ರೇವಣ್ಣ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಹಾಸನದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವುದು ಬೇಡ, ಯಾವುದೇ ರ್ಯಾಲಿಯನ್ನು ಮಾಡುವುದು ಬೇಡ. ನಮ ತಂದೆ-ತಾಯಿ ಅವರ ಆಶೀರ್ವಾದ, ಕಾರ್ಯಕರ್ತರ, ಅಭಿಮಾನಿಗಳ ನಿಮ ಪ್ರೀತಿ, ಹಾರೈಕೆಯಿಂದ ಜಾಮೀನು ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ತಮ ಮೇಲಿನ ಆರೋಪ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತಲೆಬಾಗುತ್ತೇನೆ. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ. ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ಎಲ್ಲವನ್ನೂ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾನು ಎಲ್ಲೂ ಹೋಗುವುದಿಲ್ಲ. ದೇವರ ಮೇಲೆ ನಂಬಿಕೆ ಇದೆ. ಈ ಆಪತ್ತಿನಿಂದ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News