Thursday, May 2, 2024
Homeರಾಷ್ಟ್ರೀಯಎಂ.ಕೆ.ಸ್ಟಾಲಿನ್-ಸಿದ್ದರಾಮಯ್ಯನವರ ಅಣಕು ಶವಯಾತ್ರೆಗೆ ಖಂಡನೆ

ಎಂ.ಕೆ.ಸ್ಟಾಲಿನ್-ಸಿದ್ದರಾಮಯ್ಯನವರ ಅಣಕು ಶವಯಾತ್ರೆಗೆ ಖಂಡನೆ

ನವದೆಹಲಿ,ಸೆ.27- ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿರುವ ಎರಡು ಸಂಘಟನೆಗಳ ನಡೆಯನ್ನು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಖಂಡಿಸಿದ್ದು, ಘನತೆಯಿಂದ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜನರಿಂದ ಆಯ್ಕೆಯಾದ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿರುವ ಎರಡು ಸಂಘಟನೆಗಳ ನಡೆಯನ್ನು ಖಂಡಿಸುತ್ತೇನೆ. ಘನತೆಯಿಂದ ಪ್ರತಿಭಟಿಸಿ.

ಬ್ಯಾಂಕ್ ಲಾಕರ್‌ನಲ್ಲಿದ್ದ 18 ಲಕ್ಷ ರೂ. ತಿಂದ ಗೆದ್ದಲು ಹುಳುಗಳು

ನಿಮ್ಮ ಕೋಪವನ್ನು ಯೋಗ್ಯ ರೀತಿಯಲ್ಲಿ ಪ್ರದರ್ಶಿಸಿ. ಕಾವೇರಿ ಇಬ್ಬರಿಗೂ ಪ್ರಮುಖ ವಿಷಯವಾಗಿದೆ. ನಮಗೆ ಮತ್ತು ನಮ್ಮದೆಂದು ಹೇಳಿಕೊಳ್ಳುವ ಹಕ್ಕು ನಮಗಿದೆ. ಅದನ್ನು ಸಭ್ಯತೆಯಿಂದ ಮಾಡೋಣ ಎಂದಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನ ರೈತರು ಹಾಗೂ ಕರ್ನಾಟಕದ ಸಂಘಟನೆಯೊಂದು ಮುಖ್ಯಮಂತ್ರಿಗಳ ಅಣಕು ಶವಸಂಸ್ಕಾರ ನಡೆಸುತ್ತಿರುವ ಹಾಗೂ ಬಾಯಲ್ಲಿ ಸತ್ತ ಇಲಿಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಫೋಟೊಗಳನ್ನು ಅವರು ಲಗತ್ತಿಸಿ, ಈ ಸಂಘಟನೆಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News