ನವದೆಹಲಿ,ಜೂ23– ದೇಶದಲ್ಲಿ ಇಂಧನ ಪೂರೈಕೆಯ ಸ್ಥಿರತೆ ಕಾಪಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ಪುರಿ ಅವರು ದೇಶದ ಜನತೆಯಲ್ಲಿ ಉಂಟಾಗಿದ್ದ ತೈಲ ಸಮಸ್ಯೆಯ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಇರಾನ್-ಇಸ್ರೇಲ್ ಸಂಘರ್ಷದ ಕಾರಣ ಜಾಗತಿಕ ಇಂಧನ ಉದ್ಯಮದ ನಿರ್ಣಾಯಕ ಮಾರ್ಗವಾಗಿರುವ ಹರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚುವ ಸಾಧ್ಯತೆ ಹೆಚ್ಚಿದೆ. ಈ ಜಲಸಂಧಿಯನ್ನು ಮುಚ್ಚಿದ್ದೇ ಆದಲ್ಲಿ ಇಂಧನ ಆಮದು ಮಾಡಿಕೊಳ್ಳುವ ಮಾರ್ಗ ಭಾರತಕ್ಕೆ ದುಬಾರಿಯಾಗುವ ಸಾಧ್ಯತೆ ಇದ್ದು, ದೇಶದಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣವಾಗಲಿದೆ ಎನ್ನಲಾಗುತ್ತಿತ್ತು.
ಇದೀಗ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದ ತೈಲ ಮಾರುಕಟ್ಟೆ ಕಂಪನಿಗಳು (ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ) ಹಲವಾರು ವಾರಗಳವರೆಗೆ ಸಾಕಾಗುವಷ್ಟು ಸರಬರಾಜುಗಳನ್ನು ಹೊಂದಿವೆ. ಈ ಕಂಪನಿಗಳು ಹಲವಾರು ಮಾರ್ಗಗಳಿಂದ ಇಂಧನ ಸರಬರಾಜುಗಳನ್ನು ಪಡೆಯುತ್ತಲೇ ಇವೆ.ನಮ ನಾಗರಿಕರಿಗೆ ಇಂಧನ ಪೂರೈಕೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ವಿಚಾರದಲ್ಲಿ ಯಾರೂ ಅನಗತ್ಯವಾಗಿ ಭಯಪಡಬಾರದು ಎಂದು ಹರ್ದೀಪ್ ಸಿಂಗ್ ಪುರಿ ಭರವಸೆ ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಮೋದಿ ಸರ್ಕಾರವು ಇಂಧನ ಪೂರೈಕೆಯ ಸ್ಥಿರತೆಯನ್ನು ಕಾಪಾಡುವ ಜೊತೆಗೆ ಕೈಗೆಟುಕುವಿಕೆಯ ದರದೊಂದಿಗೆ ವಿತರಿಸಲು ಕ್ರಮ ಕೈಗೊಳ್ಳುತ್ತಿದೆ. ಇಂಧನ ಪೂರೈಕೆ ಕಾಪಾಡುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹರ್ಮುಜ್ ಜಲಸಂಧಿ ಮುಚ್ಚುವಿಕೆಯ ಪರಿಣಾಮ ಸೋಮವಾರ ಮಾರುಕಟ್ಟೆ ತೆರೆದ ಬಳಿಕ ತಿಳಿಯಲಿದೆ. ಆದರೆ, ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ತೈಲ ಲಭ್ಯವಿದೆ ಎಂದಿದ್ದಾರೆ.
ಬೆಲೆಗಳನ್ನು ಊಹಿಸುವುದು ಕಷ್ಟಸಾಧ್ಯ. ಬಹಳ ಕಾಲದಿಂದ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 65ರಿಂದ 70 ಯುಎಸ್ಡಿ ಇದೆ. ಸೋಮವಾರ ಜಾಗತಿಕ ಮಾರುಕಟ್ಟೆ ತೆರೆದ ಬಳಿಕ ಇಂಧನ ಬೆಲೆಯಲ್ಲಾದ ಪರಿಣಾಮ ತಿಳಿಯಲಿದೆ. ಆದರೆ ಈ ಹಿಂದಿನಿಂದಲೂ ಹೇಳುವಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ತೈಲ ಲಭ್ಯವಿದೆ.ಜಾಗತಿಕ ಮಾರುಕಟ್ಟೆಗೆ ಹೆಚ್ಚೆಚ್ಚು ತೈಲ ಬರುತ್ತಿದೆ. ವಿಶೇಷವಾಗಿ, ಪಶ್ಚಿಮ ಭಾಗದಿಂದ. ಸಾಂಪ್ರದಾಯಿಕ ಪೂರೈಕೆದಾರರಿಗೆ ಆದಾಯ ಬೇಕಿದ್ದು, ಅವರು ಪೂರೈಸಲು ಆಸಕ್ತಿ ಹೊಂದಿದ್ದಾರೆ. ಈ ವಿಷಯದ ಬಗ್ಗೆ ಮಾರುಕಟ್ಟೆ ತಿಳಿದಿದೆ ಎಂಬ ಭರವಸೆ ಇದೆ ಎಂದರು.
ಕಳೆದೆರಡು ವಾರದಿಂದ ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ಪರಿಸ್ಥಿತಿಯ ಕುರಿತು ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಮಗೆ ಕಳೆದ ಹಲವು ವರ್ಷಗಳಿಂದ ತೈಲದ ಹೆಚ್ಚಿನ ಪೂರೈಕೆಯು ಕೇವಲ ಹರ್ಮುಜ್ ಜಲಸಂಧಿಯಿಂದ ಮಾತ್ರ ಬರುತ್ತಿಲ್ಲ. ನಮ ತೈಲ ಮಾರುಕಟ್ಟೆ ಹಲವಾರು ಮಾರ್ಗಗಳಿಂದ ಸರಬರಾಜಾಗುತ್ತಿದೆ. ನಮ ನಾಗರಿಕರಿಗೆ ಇಂಧನ ಪೂರೈಕೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಕಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇರಾನ್ ಹೊರ್ಮುಜ್ ಜಲಸಂಧಿ/ಪರ್ಷಿಯನ್ ಕೊಲ್ಲಿಯ ಉತ್ತರ ಭಾಗದಲ್ಲಿದ್ದು, ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದರೆ, ಈ ಮಾರ್ಗವನ್ನು ನಿರ್ಬಂಧಿಸುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಆದರೆ ಸೌದಿ ಅರೇಬಿಯಾ ಮತ್ತು ಯುಎಇಯಂತಹ ಪ್ರಮುಖ ರಫ್ತುದಾರ ದೇಶಗಳಿಂದ, ಭಾರತಕ್ಕೆ ದಿನಕ್ಕೆ 20 ಮಿಲಿಯನ್ ಬ್ಯಾರೆಲ್ ತೈಲವು ಹರಿದು ಬರುತ್ತಿದೆ.
ಭಾರತದ ತೈಲ ಬೇಡಿಕೆ:
ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ ಸುಮಾರು ಶೇ. 85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆಗಳ ಏರಿಕೆಯು ಭಾರತದ ತೈಲ ಆಮದು ವೆಚ್ಚವನ್ನು ಸಹಜವಾಗಿ ಹೆಚ್ಚಿಸಲಿದೆ. ಇದು ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗಿ, ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ. ವಿದೇಶಿ ವಿನಿಮಯದ ಹೆಚ್ಚಿನ ಹೊರಹೋಗುವಿಕೆಯು, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ದುರ್ಬಲಗೊಳ್ಳಲೂ ಕಾರಣವಾಗಬಹುದು.
ಆದಾಗ್ಯೂ, ಭಾರತವು ರಷ್ಯಾ ಮತ್ತು ಯುಎಸ್ನಿಂದ ಆಮದುಗಳನ್ನು ಹೆಚ್ಚಿಸುವ ಮೂಲಕ ಮತ್ತು ಕಾರ್ಯತಂತ್ರದ ಮೀಸಲುಗಳ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದೆ. ತೈಲ ಮತ್ತು ಅನಿಲ ವಲಯದಲ್ಲಿನ ಮೂಲಸೌಕರ್ಯ ಮೈಲಿಗಲ್ಲುಗಳನ್ನು ಎತ್ತಿ ತೋರಿಸುತ್ತಾ, ದೇಶವು ಈಗ 23 ಆಧುನಿಕ ಕಾರ್ಯಾಚರಣಾ ಸಂಸ್ಕರಣಾಗಾರಗಳನ್ನು ಹೊಂದಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸಲು ವಾರ್ಷಿಕವಾಗಿ ಒಟ್ಟು 257 ಮಿಲಿಯನ್ ಮೆಟ್ರಿಕ್ ಟನ್ಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಭಾರತದ ಪೆಟ್ರೋಲಿಯಂ ಸಂಗ್ರಹಣಾ ಸೌಲಭ್ಯಗಳ ಬಗ್ಗೆ ವಿಸ್ತತವಾದ ಮಾಹಿತಿ ನೀಡಿರುವ ಹರ್ದೀಪ್ ಸಿಂಗ್ ಪುರಿ, ಪುದೂರಿನಲ್ಲಿರುವ ಸಂಗ್ರಹಣಾ ಸಾಮಥ್ರ್ಯ 2.25 ಮಿಲಿಯನ್ ಮೆಟ್ರಿಕ್ ಟನ್ (ಒಒಖಿ) ಆಗಿದ್ದು, ವಿಶಾಖಪಟ್ಟಣಂ ಸೌಲಭ್ಯವು 1.33 ಒಒಖಿ ಕಚ್ಚಾ ತೈಲವನ್ನು ಸಂಗ್ರಹಿಸುವ ಸಾಮಥ್ರ್ಯವನ್ನು ಹೊಂದಿದೆ. ಇದಲ್ಲದೇ ಕರಾವಳಿಯಲ್ಲಿರುವ ಚಂಡಿಖೋಲ್ನಲ್ಲಿ ಮತ್ತೊಂದು ಕಾರ್ಯತಂತ್ರದ ಮೀಸಲು ಸೌಲಭ್ಯವನ್ನು ನಿರ್ಮಿಸಲಾಗುತ್ತಿದೆ ಎಂದು ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ