Tuesday, May 13, 2025
Homeರಾಷ್ಟ್ರೀಯ | Nationalಪಹಲ್ಗಾಮ್‌ಗೆ ಎನ್‌ಐಎ ತಂಡ, ಶ್ರೀನಗರದಿಂದ ಶವಗಳ ರವಾನೆ

ಪಹಲ್ಗಾಮ್‌ಗೆ ಎನ್‌ಐಎ ತಂಡ, ಶ್ರೀನಗರದಿಂದ ಶವಗಳ ರವಾನೆ

NIA Probes Pahalgam Attack: NIA Team Reaches Terror-Hit Site in Kashmir

ನವದೆಹಲಿ, ಏ. 23– ಉಗ್ರ ಕೃತ್ಯ ನಡೆದ ಪಹಲ್ಗಾಮ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಭೇಟಿ ನೀಡಿದೆ.ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಪೀಡಿತ ಪಹಲ್ಗಾಮ್‌ಗೆ ಇನ್ಸ್ಪೆಕ್ಟರ್‌ ಜನರಲ್‌ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌‍ಐಎ) ತಂಡವನ್ನು ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ತಂಡವು ಪಹಲ್ಗಾಮ್‌ಗೆ ತೆರಳಿ ಭೀಕರ ಭಯೋತ್ಪಾದಕ ದಾಳಿಯ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರಿಗೆ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಶಾಂತ ಸೌಂದರ್ಯಕ್ಕಾಗಿ ಮಿನಿ ಸ್ವಿಟ್ಜರ್ಲೆಂಡ್‌ ಎಂದು ಕರೆಯಲ್ಪಡುವ ಪಹಲ್ಗಾಮ್‌ನ ಬೈಸರನ್‌ ಹುಲ್ಲುಗಾವಲುಗಳಲ್ಲಿ ಕುದುರೆ ಸವಾರಿ ಅಥವಾ ಪಿಕ್ನಿಕ್‌ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದು 28 ಮಂದಿಯನ್ನು ಹತ್ಯೆ ಮಾಡಿದ್ದರು.

ಶ್ರೀನಗರದಿಂದ ಶವಗಳ ರವಾನೆ :
ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಶವಗಳನ್ನು ಇಂದು ಬೆಳಿಗ್ಗೆ ಶ್ರೀನಗರಕ್ಕೆ ತರಲಾಯಿತು. ಬೆಳಗಿನ ಜಾವದಲ್ಲಿ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಗೆ ತರಲಾದ 26 ಶವಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಸ್ಥಳಾಂತರಿಸಲಾಯಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಲಿಪಶುಗಳ ಶವಪೆಟ್ಟಿಗೆಗೆ ಪುಷ್ಪಗುಚ್ಚ ಅರ್ಪಿಸಿ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ಮೃತರ ಊರುಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯಿತು.

RELATED ARTICLES

Latest News