Home Blog Page 1899

ಮನವೊಲಿಸಿದ ಬಿಎಸ್‌ವೈ, ಧರಣಿ ಕೈಬಿಟ್ಟ ಶಾಸಕ ಮುನಿರತ್ನ

ಬೆಂಗಳೂರು,ಅ.11- ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ ಅನುದಾನವನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ವಿಧಾನಸೌಧ, ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಇಂದು ಕೆಲಕಾಲ ಧರಣಿ ನಡೆಸಿದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ರದ್ದುಗೊಳಿಸಿ ಬೇರೆ ಕ್ಷೇತ್ರಕ್ಕೆ ಕೊಟ್ಟಿರುವುದು ನ್ಯಾಯವೇ ಎಂದು ಪ್ರಶ್ನಿಸುವ ಫಲಕವನ್ನು ಹಿಡಿದು ಧರಣಿ ನಡೆಸಿದರು. ಆ ಫಲಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಭಾವಚಿತ್ರವೂ ಇತ್ತು.

ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?

ಆರಂಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುನಿರತ್ನ ಅವರನ್ನು ಬೆಂಬಲಿಸಿ ಧರಣಿ ನಡೆಸಲು ಮುಂದಾದರು. ಮಾಜಿ ಮೇಯರ್ ನಾರಾಯಣಸ್ವಾಮಿ, ಮಾಜಿ ಪಾಲಿಕೆ ಸದಸ್ಯಜಿ.ಕೆ.ವೆಂಕಟೇಶ್ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಪೊಲೀಸರು ಮುನಿರತ್ನ ಅವರನ್ನು ಬಿಟ್ಟು ಉಳಿದ ಕಾರ್ಯಕರ್ತರಿಗೆ ಧರಣಿ ಮಾಡಲು ಅವಕಾಶ ನೀಡದೆ, ಶಾಸಕರು, ಮಾಜಿ ಶಾಸಕರನ್ನು ಹೊರತುಪಡಿಸಿ ಉಳಿದವರಿಗೆ ಇಲ್ಲಿ ಧರಣಿ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ, ಶಾಸಕ ಮುನಿರತ್ನ ಅವರನ್ನು ಧರಣಿ ಹಿಂಪಡೆಯುವಂತೆ ಮನವೊಲಿಸಿದರು. ಬಿಎಸ್‍ವೈ ಮಾತಿಗೆ ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂಪಡೆದರು. ಇದಕ್ಕೂ ಮುನ್ನ ತಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನವನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಬಾವುಟ ಹಿಡಿದು ಮುನಿರತ್ನ ಅವರು ಏಕಾಂಗಿಯಾಗಿ ಧರಣಿ ನಡೆಸಿದರು.

ಚೆನ್ನೈನಿಂದ ಅಹಮದಾಬಾದ್‍ಗೆ ಶುಭ್‍ಮನ್ ಗಿಲ್ ಶಿಫ್ಟ್

ಅಹ್ಮದಾಬಾದ್,ಅ.11- ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಸ್ಟಾರ್ ಆಟಗಾರ ಶುಭ್‍ಮನ್ ಗಿಲ್ ಚೇತರಿಸಿಕೊಂಡಿದ್ದು, ವಿಶ್ರಾಂತಿಗಾಗಿ ಚೆನ್ನೈನಿಂದ ಅಹ್ಮದಾಬಾದ್‍ಗೆ ಶಿಫ್ಟ್ ಆಗಲಿದ್ದಾರೆ. ಮೂಲಗಳ ಪ್ರಕಾರ ಶುಭ್‍ಮನ್ ಗಿಲ್ ಇಂದು ವಾಣಿಜ್ಯ ವಿಮಾನದಲ್ಲಿ ಚೆನ್ನೈನಿಂದ ಅಹಮದಾಬಾದ್‍ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು 24 ವರ್ಷದ ಆಟಗಾರ ಶುಭ್ ಮನ್ ಗಿಲ್ ಡೆಂಗ್ಯೂನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಟ್ರ್ಯಾಕ್‍ಗೆ ಮರಳುವ ಉತ್ತೇಜಕ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಪ್ರಸ್ತುತ ದೆಹಲಿಯಲ್ಲಿರುವ ಭಾರತೀಯ ತಂಡದ ಆಡಳಿತವು ಯುವ ಆಟಗಾರರ ಮೇಲೆ ನಿಗಾ ಇರಿಸುವುದನ್ನು ಮುಂದುವರೆಸಿದೆ.

ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?

ಅಕ್ಟೋಬರ್ 10 ರಂದು ಕ್ರಿಕೆಟ್ ನೆಕ್ಸ್ಟ್ ವರದಿಯಂತೆ, ಗಿಲ್ ಅವರ ಪ್ಲೇಟ್‍ಲೆಟ್‍ಗಳು ಪ್ರತಿ ಮೈಕ್ರೋಲೀಟರ್‍ಗೆ 1,00,000 ಕ್ಕಿಂತ ಕಡಿಮೆಯಾದ ನಂತರ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಒಂದು ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು.

ಆದರೆ ಹೋಟೆಲ್‍ನಲ್ಲಿ ಚಿಕಿತ್ಸೆ ಪಡೆಯುವುದನ್ನು ಮುಂದುವರೆಸಲಾಗಿತ್ತು. ಇದೀಗ ಗಿಲ್ ಚೇತರಿಕೆಯಲ್ಲಿದ್ದು, ಅಹಮದಾಬಾದ್‍ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ. ಈಗಾಗಲೇ ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಗಿಲ್ ಅಲಭ್ಯತೆ ಖಚಿತವಾಗಿದ್ದು ಮುಂದಿನ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಗಿಲ್ ಲಭ್ಯತೆ ಅಸ್ಪಷ್ಟವಾಗಿದೆ.

ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’

ಗಿಲ್ ಶೇ. 70-80%ರಷ್ಟು ಚೇತರಿಸಿಕೊಂಡಿದ್ದಾರೆ. ಆದರೆ ಈಗಲೇ ಅವರು ಯಾವಾಗ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಲು ಕಷ್ಟಕರ ಎಂದು ತಂಡದ ಮೂಲಗಳು ತಿಳಿಸಿವೆ. ಶುಭ್ ಮನ್ ಗಿಲ್ ಚೇತರಿಸಿಕೊಳ್ಳಲು ಮತ್ತು ಫಿಟ್ನೆಸ್ ಅನ್ನು ಮರಳಿ ಪಡೆಯಲು ಎಲ್ಲಾ ಸಮಯವನ್ನು ನೀಡಲಾಗುವುದು. ಈ ಹಂತದಲ್ಲಿ ಬದಲಿಗಳನ್ನು ಹುಡುಕುವ ಅಥವಾ ಚರ್ಚಿಸುವ ಯಾವುದೇ ಆಲೋಚನೆಯಿಲ್ಲ. ಗಿಲ್ ಈಗಾಗಲೇ ಸಕಾರಾತ್ಮಕ ಚಿಹ್ನೆಗಳನ್ನು ತೋರಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಬಿಸಿಸಿಐನ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

ಪಟಾಕಿ ದುರಂತ : ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ

ಬೆಂಗಳೂರು,ಅ.11- ಅತ್ತಿಬೆಲೆ ಪಟಾಕಿ ಬೆಂಕಿ ದುರಂತದ ಹಿನ್ನಲೆಯಲ್ಲಿ ಆನೇಕಲ್ ತಹಸೀಲ್ದಾರ್(ಹಿಂದಿನ) ಶಶಿಧರ ಮಾಡ್ಯಾಳ್ ಸೇರಿದಂತೆ ನಾಲ್ವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ನೀಡಿರುವ ವರದಿ ಆಧರಿಸಿ ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇಲೆ ತಹಸೀಲ್ದಾರ್ ಶಶಿಧರ ಮಾಡ್ಯಾಳ್ ಅತ್ತಿಬೆಲೆ ನಾಡಕಚೇರಿ ಉಪತಹಸೀಲ್ದಾರ್ ಶ್ರೀಧರ್.ವಿ.ಸಿ ಅತ್ತಿಬೆಲೆ ವೃತ್ತದ ರಾಜಸ್ವ ನಿರೀಕ್ಷಕ ಪುಷ್ಪರಾಜ್.ಎ ಹಾಗೂ ಗ್ರಾಮ ಆಡಳಿತಾಧಿಕಾರಿ ಭಾಗೇಶ್ ಹೊಸಮನೆ ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?

ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನ ಆಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಹಸಿರು ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಕಾರಣರಾದ ಮತ್ತು ಅಸಮರ್ಪಕ ವರದಿ ಸಲ್ಲಿಸಲು ಕಾರಣರಾದ ಆರೋಪದ ಮೇಲೆ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಿ ಜಂಟಿ ಇಲಾಖೆ ವಿಚಾರಣೆಯನ್ನು ಬಾಕಿ ಇರಿಸಿ ಸೇವಾ ನಿಯಮಗಳ ಅನ್ವಯ ಅಮಾನತುಗೊಳಿಸಲಾಗಿದೆ.

ಅ.7ರಂದು ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ 14 ಮಂದಿ ಮೃತಪಟ್ಟಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತಕ್ಕೆ ಮೇಲಿನ ಅಧಿಕಾರಿಗಳೇ ಕಾರಣ ಎಂದು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ಡ್ರಗ್ಸ್ ಕಳ್ಳಸಾಗಣಿಕೆದಾರನಿಂದ 4.94 ಕೋಟಿ ರೂ.ನಗದು ಸೀಜ್

ಚಂಡೀಗಢ, ಅ 11 (ಪಿಟಿಐ)- ಶಂಕಿತ ಮಾದಕ ವಸ್ತು ಕಳ್ಳಸಾಗಾಣೆದಾರರನ್ನು ಬಂಧಿಸಿರುವ ಪಂಜಾಬ್ ಮತ್ತು ಜಮ್ಮು ಕಾಶ್ಮೀರದ ಪೊಲೀಸರು 4.94 ಕೋಟಿ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಲೂಧಿಯಾನಾದ ಮುಲ್ಲನ್‍ಪುರ್ ದಖಾದಿಂದ ಶಂಕಿತ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಲಾಗಿದೆ.

ಆತನಿಂದ ರಿವಾಲ್ವರ್ ಮತ್ತು 38 ನಕಲಿ ವಾಹನ ನಂಬರ್ ಪ್ಲೇಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಇತ್ತೀಚೆಗೆ ಜಮ್ಮುವಿನಿಂದ 30 ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಹೆಸರುಗಳಲ್ಲಿ ಆರೋಪಿಯೂ ಒಬ್ಬರು ಎಂದು ಅವರು ಮಾಹಿತಿ ನೀಡಿದ್ದಾರೆ.

ಇಸ್ರೇಲ್ ಪರ ಭಾರತೀಯ ಅಮೆರಿಕನ್ನರ ರ‍್ಯಾಲಿ

ಜಮ್ಮುವಿನಲ್ಲಿ ಇತ್ತೀಚಿಗೆ ಪತ್ತೆಯಾದ 30 ಕಿಲೋಗ್ರಾಂಗಳಷ್ಟು ಹೆರಾಯಿನ್‍ನ ಪ್ರಮುಖ ಆರೋಪಿಗಳಲ್ಲಿ ಈತನೂ ಒಬ್ಬ. ಹಿಂದಕ್ಕೆ ಮತ್ತು ಮುಂದಕ್ಕೆ ಸಂಬಂಧವನ್ನು ಸ್ಥಾಪಿಸಲು ತನಿಖೆ ನಡೆಯುತ್ತಿದೆ ಎಂದು ಯಾದವ್ ಹೇಳಿದರು.

ನ್ಯೂಜೆರ್ಸಿಯಲ್ಲಿ ತಲೆ ಎತ್ತಿದೆ ವಿಶ್ವದ 2ನೇ ಅತಿದೊಡ್ಡ ಹಿಂದೂ ದೇವಾಲಯ

ರಾಬಿನ್ಸ್‍ವಿಲ್ಲೆ, ಅ 11 (ಪಿಟಿಐ) ವಿಶ್ವದಲ್ಲೇ ಎರಡನೇ ಅತಿದೊಡ್ಡ ಹಾಗೂ ಪಶ್ಚಿಮ ಗೋಳಾರ್ಧದಲ್ಲಿ ಅತಿದೊಡ್ಡ ಅಕ್ಷರಧಾಮ ದೇವಾಲಯವನ್ನು ಅಮೆರಿಕದ ನ್ಯೂಜೆರ್ಸಿಯಲ್ಲಿ ಉದ್ಘಾಟಿಸಲಾಗಿದೆ. 185 ಎಕರೆಗಳಷ್ಟು ವಿಸ್ತಾರವಾದ ನ್ಯೂಜೆರ್ಸಿಯ ರಾಬಿನ್ಸ್‍ವಿಲ್ಲೆ ನಗರದಲ್ಲಿ ಅಕ್ಷರಧಾಮ ದೇವಾಲಯವು 191 ಅಡಿ ಎತ್ತರದಲ್ಲಿದೆ.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ್ ಹಾಗೂ ನಾಯಕ ಮಹಂತ್ ಸ್ವಾಮಿ ಮಹಾರಾಜ್ ಅವರ ಸಮ್ಮುಖದಲ್ಲಿ ದೇವಾಲಯವನ್ನು ಉದ್ಘಾಟಿಸಲಾಗಿದೆ. ಉತ್ತರ ಅಮೆರಿಕಾದಲ್ಲಿ ಅಕ್ಷರಧಾಮವನ್ನು ನಿರ್ಮಿಸುವುದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ದೈವಿಕ ಆಶಯವಾಗಿತ್ತು, ಅಲ್ಲಿ ಜನರು ಬಂದು ಭೇಟಿ ನೀಡಬಹುದು, ಜನಾಂಗ, ಮತ ಅಥವಾ ಧರ್ಮವನ್ನು ಲೆಕ್ಕಿಸದೆ ಎಂದು ಮಹಂತ್ ಸ್ವಾಮಿ ಮಹಾರಾಜ್ ಕರೆ ನೀಡಿದ್ದಾರೆ.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಉದ್ಘಾಟನಾ ಸಮಾರಂಭದಲ್ಲಿ ಡೆಲವೇರ್ ಗವರ್ನರ್ ಜಾನ್ ಕಾರ್ನಿ ಮತ್ತು ಕಾಂಗ್ರೆಸ್ ಸದಸ್ಯ ಸ್ಟೇನಿ ಹೋಯರ್ ಉಪಸ್ಥಿತರಿದ್ದರು. ಇದು ಈ ಭೂಗೋಳದ ಎರಡನೇ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಮತ್ತು ಸಹಜವಾಗಿ, ಪಶ್ಚಿಮ ಗೋಳಾರ್ಧದಲ್ಲಿ ಅತಿ ದೊಡ್ಡದಾಗಿದೆ, ಇದನ್ನು ಅಕ್ಟೋಬರ್ 8 ರಂದು ಮಹಂತ್ ಸ್ವಾಮಿ ಮಹಾರಾಜ್ ಅವರ 90 ನೇ ಹುಟ್ಟುಹಬ್ಬದ ಆಚರಣೆಯಂದು ಉದ್ಘಾಟಿಸಲಾಗಿದೆ.

ದೇವಾಲಯಗಳನ್ನು ರಚಿಸುವ ಮೂಲ ಉದ್ದೇಶವು ಮೌಲ್ಯಗಳೊಂದಿಗೆ ಜನರನ್ನು ಪ್ರೇರೇಪಿಸುವುದು. ಧರ್ಮ, ಜ್ಞಾನ, ವೈರಾಗ್ಯ ಮತ್ತು ಭಕ್ತಿ, ಏಕಾಂತಿಕ ಧರ್ಮದ ನಾಲ್ಕು ಸ್ತಂಭಗಳಾದ ಭಾರತೀಯ ಗ್ರಂಥಗಳ ಪ್ರಕಾರ ಭಗವಾನ್ ಸ್ವಾಮಿನಾರಾಯಣರಿಂದ ಉತ್ತಮವಾಗಿ ಸೂಚಿಸಲ್ಪಟ್ಟಿದೆ. ಹಾಗಾಗಿ, ಇದು ಭಾರತೀಯ ಸಂಸ್ಕøತಿ ಮತ್ತು ಸಂಪ್ರದಾಯಕ್ಕೆ ಮೀಸಲಾದ ಸ್ಮಾರಕವಾಗಿದೆ. ಇದು ಭಗವಾನ್ ಸ್ವಾಮಿನಾರಾಯಣ ಅವರ ಜೀವನ ಮತ್ತು ಬೋಧನೆಗಳಿಗೆ ಸಮರ್ಪಿತವಾದ ಸ್ಮಾರಕವಾಗಿದೆ ಎಂದು ಅವರು ಹೇಳಿದರು.

5ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್-ಹಮಾಸ್ ಯುದ್ಧ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ಸ್

ಈ ದೇವಾಲಯವು ರಾಮಾಯಣ, ಮಹಾಭಾರತದ ಕಥೆಯನ್ನು ಅದರ ಕಲ್ಲುಗಳ ಮೇಲೆ ಕೆತ್ತಲಾಗಿದೆ. ಇದು 150 ಕ್ಕೂ ಹೆಚ್ಚು ಭಾರತೀಯ ಸಂಗೀತ ವಾದ್ಯಗಳನ್ನು ಹೊಂದಿದೆ ಮತ್ತು ಅದರ ಕಂಬಗಳು ಮತ್ತು ಗೋಡೆಯ ಮೇಲೆ ಎಲ್ಲಾ ಪ್ರಮುಖ ನೃತ್ಯ ಭಂಗಿಗಳನ್ನು ಹೊಂದಿದೆ.

ದೇವಾಲಯವು ಸಾರ್ವತ್ರಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಧರ್ಮ ಮತ್ತು ಮಾಧ್ಯಮದ ವಿದ್ವಾಂಸ ಮತ್ತು ಅಕ್ಷರಧಾಮ ದೇವಾಲಯದ ಸ್ವಯಂಸೇವಕ ವಕ್ತಾರ ಯೋಗಿ ತ್ರಿವೇದಿ ಹೇಳಿದ್ದಾರೆ. ಬಲ್ಗೇರಿಯಾ, ಇಟಲಿ, ಗ್ರೀಸ್ , ಟರ್ಕಿ, ಭಾರತ ಸೇರಿದಂತೆ ಏಳು ವಿವಿಧ ದೇಶಗಳ ಕಲ್ಲುಗಳನ್ನು ದೇವಾಲಯದ ನಿರ್ಮಾಣದಲ್ಲಿ ಬಳಸಲಾಗಿದೆ.

ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’

ನವದೆಹಲಿ,ಅ.11- ಪಂಜಾಬ್‍ನ ಪಠಾಣ್‍ಕೋಟ್ ವಾಯುಪಡೆ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್‍ನನ್ನು ಪಾಕಿಸ್ತಾನದ ಗುಜ್ರಾನ್‍ವಾಲಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ.

ಶಾಹಿದ್ ಲತೀಫ್ ನಿಷೇಧಿತ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಎಂದೇ ಹೆಸರುವಾಸಿಯಾಗಿದ್ದ. ಪಠಾಣ್‍ಕೋಟ್‍ನಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರಲ್ಲಿ ಈತನೇ ಪ್ರಮುಖ ರೂವಾರಿ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರನಾಗಿದ್ದ ಈತ ಭಾರತದ ವಿರುದ್ಧ ಯಾವಾಗಲೂ ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದ.

ಹಮಾಸ್ ಮುಖ್ಯಸ್ಥನ ತಂದೆಯ ಮನೆ ಮೇಲೆ ಇಸ್ರೇಲ್ ದಾಳಿ

ಭಾರತದಲ್ಲಿ 16 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಲತೀಫ್ ಅವರನ್ನು 2010 ರಲ್ಲಿ ವಾಘಾ ಮೂಲಕ ಗಡೀಪಾರು ಮಾಡಲಾಗಿತ್ತು. ಕಳೆದ 1994ರ ನವೆಂಬರ್ 12ರಂದು ಬಂಧಿಸಲಾಗಿತ್ತು. ಲತೀಫ್ ಅವರನ್ನು ಭಾರತ ಸರ್ಕಾರವು ಭಯೋತ್ಪಾದಕ ಎಂದು ಪಟ್ಟಿ ಮಾಡಿತ್ತು. ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿಯಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಗೆ ಬೇಕಾಗಿದ್ದ.

1994ರಲ್ಲಿ ಶಾಹಿದ್ ಲತೀಫ್ ಅವರನ್ನು ಭಯೋತ್ಪಾದನೆಯ ಆರೋಪದ ಮೇಲೆ ಭಾರತದಲ್ಲಿ ಬಂಧಿಸಲಾಗಿತ್ತು. ನಂತರ 2010ರಲ್ಲಿ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಯಿತು. 1999ರಲ್ಲಿ ಇಂಡಿಯನ್ ಏರ್‍ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಲತೀಫ್ ಕೂಡ ಆರೋಪಿಯಾಗಿದ್ದ. 2016ರ ಜನವರಿ 2ರಂದು ಪಠಾಣ್‍ಕೋಟ್‍ನಲ್ಲಿರುವ ವಾಯುಪಡೆಯ ವಾಯುನೆಲೆ ಮೇಲೆ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು.

ಲತಾ ರಜನಿಕಾಂತ್ ವಿರುದ್ಧದ ಕ್ರಿಮಿನಲ್ ಆರೋಪಕ್ಕೆ ಮರುಜೀವ

ಸುಮಾರು ನಾಲ್ಕು ದಿನಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಏಳು ಭದ್ರತಾ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ಗುಂಡಿನ ಚಕಮಕಿಯಲ್ಲಿ ನಾಲ್ವರು ದಾಳಿಕೋರರು ಕೂಡ ಮೃತಪಟ್ಟಿದ್ದರು. ಜನವರಿ 3 ರಂದು, ಐಇಡಿ ಸೋಟದ ನಂತರ ವಾಯುನೆಲೆಯಲ್ಲಿ ಇನ್ನೊಬ್ಬ ಭದ್ರತಾ ಅಧಿಕಾರಿ ಕೊಲ್ಲಲ್ಪಟ್ಟರು. ದಾಳಿಯ ತನಿಖೆಯಲ್ಲಿ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ತಿಳಿದುಬಂದಿದೆ

ಕಾತ್ಯಾಯಿನಿ ಅಮ್ಮ ಇನ್ನಿಲ್ಲ

ತಿರುವನಂತಪುರಂ, ಅ 11 (ಪಿಟಿಐ) ಕೇರಳ ರಾಜ್ಯ ಸಾಕ್ಷರತಾ ಮಿಷನ್ ಅಡಿಯಲ್ಲಿ ಅತ್ಯಂತ ಹಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾತ್ಯಾಯಿನಿ ಅಮ್ಮ ಕರಾವಳಿ ಭಾಗದ ಅಲಪ್ಪುಳ ಜಿಲ್ಲೆಯ ಚೆಪ್ಪಾಡ್ ಗ್ರಾಮದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 101 ವರ್ಷದ ಅಮ್ಮ ಅವರು ಪಾಶ್ರ್ವವಾಯುವಿಗೆ ಒಳಗಾದ ನಂತರ ಸ್ವಲ್ಪ ಸಮಯದವರೆಗೆ ಹಾಸಿಗೆ ಹಿಡಿದಿದ್ದರು ಎಂದು ವರದಿಯಾಗಿದೆ.

ಕಾತ್ಯಾಯಿನಿ ಅಮ್ಮ ಅವರು ದಕ್ಷಿಣ ರಾಜ್ಯದ ಸಾಕ್ಷರತಾ ಮಿಷನ್ ಅಡಿಯಲ್ಲಿ 96 ನೇ ವಯಸ್ಸಿನಲ್ಲಿ ಹಿರಿಯ ವಿದ್ಯಾರ್ಥಿಯಾಗಿ ಮಾತ್ರವಲ್ಲದೆ ನಾಲ್ಕನೇ ತರಗತಿಯ ಸಮಾನ ಪರೀಕ್ಷೆಯಾದ ಅಕ್ಷರಲಕ್ಷಂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಖ್ಯಾತಿಯನ್ನು ಗಳಿಸಿದ್ದರು.

ಅಮ್ಮ ಅವರು ಮಾರ್ಚ್ 2020 ರಲ್ಲಿ ಮಹಿಳಾ ದಿನದಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ನಾರಿ ಶಕ್ತಿ ಪ್ರಶಸ್ತಿಯನ್ನು ಪಡೆದಿದ್ದರು ಅವರು 2019 ರಲ್ಲಿ ಕಾಮನ್‍ವೆಲ್ತ ಆಫ್ ಲರ್ನಿಂಗ್ ಗುಡ್‍ವಿಲ್ ರಾಯಭಾರಿಯಾದರು.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಆಕೆಯ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಶಸ್ತಿ ಗೆದ್ದ ನಂತರ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡರು ಮತ್ತು 10 ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಹೆಚ್ಚಿನ ಅಧ್ಯಯನ ಮತ್ತು ಉದ್ಯೋಗ ಪಡೆಯುವ ಬಯಕೆ ಹೊಂದಿದ್ದರು.

ಆಧುನಿಕ ಕೇರಳವನ್ನು ರೂಪಿಸಲು ಸಹಾಯ ಮಾಡಿದ ನಮ್ಮ ಸಾಕ್ಷರತಾ ಆಂದೋಲನಕ್ಕೆ ಅವರ ನಿಧನವು ಗಮನಾರ್ಹ ನಷ್ಟವಾಗಿದೆ. ಹೃತ್ಪೂರ್ವಕ ಸಂತಾಪ ಎಂದು ಸಿಎಂ ಹೇಳಿದರು.ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಕೂಡ ಕಾತ್ಯಾಯನಿ ಅಮ್ಮನವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

5ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್-ಹಮಾಸ್ ಯುದ್ಧ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ಸ್

ಓದಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬೆಳೆದು 96ನೇ ವಯಸ್ಸಿನಲ್ಲಿ ಅಕ್ಷರಸ್ಥಳಾಗಿ ಬೆಳೆದ ಅಮ್ಮ ದೃಢಸಂಕಲ್ಪದ ಪ್ರತೀಕ ಎಂದು ಸಚಿವರು ಬಣ್ಣಿಸಿದ್ದಾರೆ.

ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?

ಬೆಂಗಳೂರು,ಅ.11- ಬಡವರ ಪಾಲಿನ ಅನ್ನಪೂರ್ಣೇಶ್ವರಿ ಎಂದೆ ಪ್ರಸಿದ್ಧಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ್‍ಗಳಿಗೆ ಇನ್ನು ಓಪನಿಂಗ್ ಭಾಗ್ಯ ಸಿಕ್ಕಿಲ್ಲ.ಇದನ್ನು ಗಮನಿಸಿದರೆ ಬಿಬಿಎಂಪಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸಿಗೆ ಎಳ್ಳು ನೀರು ಬಿಟ್ರ ಎಂಬ ಅನುಮಾನ ಕಾಡತೊಡಗಿದೆ.

ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರ್ತಿದಂಗೆ ಇಂದಿರಾ ಕ್ಯಾಂಟೀನ್ ಅನ್ನೂ ಮರು ಓಪನ್ ಮಾಡ್ತಿವಿ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರೂ ಆದರೆ, ಇದುವರೆಗೂ ಇಂದಿರಾ ಕ್ಯಾಂಟಿನ್‍ಗಳು ಓಪನ್ ಆಗದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಕಳೆದ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರಿನ ಕೇಲವು ಕಡೆ ಇಂದಿರಾ ಕ್ಯಾಂಟೀನ್ ಗಳನ್ನ ಬಂದ್ ಮಾಡಲಾಗಿತ್ತು. ಆದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್ ಸರ್ಕಾರ ಬರ್ತಿದಂಗೆ ಬಾಗಿಲು ಮುಚ್ಚಿದ ಕ್ಯಾಂಟೀನ್ ಗಳನ್ನೂ ರೀ ಓಪನ್ ಮಾಡ್ತಿವಿ ಅಂತ ಸಿಎಂ ಹೇಳಿಕೆ ನೀಡಿದ್ರು.

ನಗರದ ಕಾಲೇಜು, ಬಸ್ ಸ್ಟಾಪ್ , ವಿಧಾನಸೌಧ, ಏರ್‍ಪೆಪೋರ್ಟ್‍ಗಳಲ್ಲೂ ಕೂಡ ಕ್ಯಾಂಟೀನ್ ಓಪನ್ ಮಾಡ್ತಿವಿ ಅಂತ ಭರವಸೆ ನೀಡಿದ್ದರು. ಇದರ ಜತೆಗೆ ಊಟದಲ್ಲೂ ವಿಶೇಷತೆ ಇರಲಿದೆ ಎಂದು ಹೇಳಿ ನಾಲ್ಕು ತಿಂಗಳು ಕಳೆದರೂ ಕ್ಯಾಂಟಿನ್‍ಗಳು ಮಾತ್ರ ಓಪನ್ ಆಗುತ್ತಿಲ್ಲ.

ಹರಿದಾಡುತ್ತಿದೆ ಇಸ್ರೇಲ್-ಹಮಾಸ್ ಯುದ್ಧದ ನಕಲಿ ವಿಡಿಯೋಗಳು

ಹಾಗಾದ್ರೆ ಇಂದಿರಾ ಕ್ಯಾಂಟೀನ್ ಓಪನ್ ಮಾಡೋದಕ್ಕೆ ಸರ್ಕಾರಕ್ಕೆ ಮನಸು ಇಲ್ವ,,? ಅಥವಾ ಗ್ಯಾರಂಟಿ ಯೋಜನೆ ಜಾರಿಯಿಂದ ಕ್ಯಾಂಟೀನ್ ಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲವೋ ಎನ್ನೋದು ಆರ್ಥವಾಗುತ್ತಿಲ್ಲ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಕ್ಯಾಂಟೀನ್ ಗಳು ಇವೇ ಆದರೆ, ಈಗ 30 ಕ್ಯಾಂಟೀನ್ ಗಳು ಬಾಗಿಲು ಬಂದ್ ಅಗಿವೇ,, ಅ„ಕಾರಕ್ಕೆ ಬರ್ತಿದಂಗೆ ಬಡವರ ಹಸಿವು ನಿಗಿಸೋ ಕ್ಯಾಂಟೀನ್ ರೀ ಓಪನ್ ಮಾಡ್ತಿನಿ ಅಂದ ಸರ್ಕಾರ ಈಗ ಯಾಕೆ ಓಪನ್ ಮಾಡ್ತಿಲ್ಲ,, ಸಿದ್ದರಾಮಯ್ಯ ಕನಸಿನ ಕೂಸಿಗೆ ತಣ್ಣಿರು ಎರಚಿತ ಗ್ಯಾರಂಟಿ ಯೋಜನೆಗಳು ಎಂಬ ಅನುಮಾನ ಕಾಡತೊಡಗಿದೆ.

ಹಮಾಸ್ ಮುಖ್ಯಸ್ಥನ ತಂದೆಯ ಮನೆ ಮೇಲೆ ಇಸ್ರೇಲ್ ದಾಳಿ

ಟೆಲ್ ಅವೀವ್,ಅ.11- ಇಸ್ರೇಲ್ ಭದ್ರತಾ ಪಡೆಗಳು ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಎಂದು ನಂಬಲಾದ ಹಮಾಸ್‍ನ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಡೀಫ್ ಅವರ ತಂದೆಯ ಮನೆಯ ಮೇಲೂ ಬಾಂಬ್ ದಾಳಿ ಮಾಡಿದೆ ವರದಿಯಾಗಿದೆ.

ಪ್ರದೇಶದಲ್ಲಿ ತನ್ನ ಮೂರನೇ ವೈಮಾನಿಕ ದಾಳಿಯಲ್ಲಿ, ಇಸ್ರೇಲಿ ಪೈಟರ್ ಜೆಟ್‍ಗಳು ನೆರೆಹೊರೆಯಲ್ಲಿ 450 ಹಮಾಸ್ ಗುರಿಗಳನ್ನು ಹೊಡೆದುರುಳಿಸಲಾಗಿದೆ ಐಡಿಎ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದೆ.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಐಡಿಎ ಗಾಜಾ ಪಟ್ಟಿಯಲ್ಲಿ ವ್ಯಾಪಕ ಅಲೆಗಳ ದಾಳಿಯನ್ನು ಮುಂದುವರೆಸಿದೆ; ಡಜನ್‍ಗಟ್ಟಲೆ ವಾಯುಪಡೆಯ ಪೈಟರ್ ಜೆಟ್‍ಗಳು ಕಳೆದ ದಿನದಲ್ಲಿ ಮೂರನೇ ಬಾರಿಗೆ ಅಲ್ ಪೈರ್ಕನ್ ನೆರೆಹೊರೆಯಲ್ಲಿ 200 ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿವೆ, ಇದು ಕೊನೆಯ ದಿನದಲ್ಲಿ ಈ ಪ್ರದೇಶದಲ್ಲಿ ನಡೆದ ಮೂರನೇ ದಾಳಿಯಾಗಿದೆ. ನೆರೆಹೊರೆಯ ಪ್ರದೇಶದಲ್ಲಿ 450 ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ಮಾಡಲಾಗಿದೆ.

ಏತನ್ಮಧ್ಯೆ, ಹಮಾಸ್‍ನ ಮೇಲಿನ ಯುದ್ಧವು ಐದನೇ ದಿನಕ್ಕೆ ಕಾಲಿಟ್ಟಂತೆ, ಇಸ್ರೇಲ್‍ನಲ್ಲಿ ಭಯೋತ್ಪಾದಕ ಸಂಘಟನೆಯಿಂದ ರಾಕೆಟ್ ಮತ್ತು ಹೊಂಚುದಾಳಿ ದಾಳಿಯಿಂದ 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಅಥವಾ ಒತ್ತೆಯಾಳುಗಳಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಭಾರತ ಜಾಗತಿಕ ಉಜ್ವಲ ತಾಣ ; ಪ್ರಧಾನಿ ಮೋದಿ

ನವದೆಹಲಿ,ಅ.11- ಜಾಗತಿಕ ಆರ್ಥಿಕತೆಯ ಆತಂಕದ ನಡುವೆಯೇ ಭಾರತದಲ್ಲಿ ದೃಢವಾದ ಆರ್ಥಿಕ ಬೆಳವಣಿಗೆಯನ್ನು IMF ಒಪ್ಪಿಕೊಂಡಿದ್ದು, ದೇಶವು ಜಾಗತಿಕ ಉಜ್ವಲ ತಾಣವಾಗಿದೆ ಮತ್ತು ಬೆಳವಣಿಗೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಹಣಕಾಸು ನಿಧಿ ಭಾರತದ ಜಿಡಿಪಿಯನ್ನು ಶೇ. 0.2 ರಿಂದ 6.3 ಹೆಚ್ಚಿಸಿದೆ, ಅದು ಜಾಗತಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 3 ಕ್ಕೆ ತಗ್ಗಿಸಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮ ಜನರ ಶಕ್ತಿ ಮತ್ತು ಕೌಶಲ್ಯದಿಂದ ಬಲಗೊಂಡಿರುವ ಭಾರತವು ಜಾಗತಿಕ ಉಜ್ವಲ ತಾಣವಾಗಿದೆ, ಬೆಳವಣಿಗೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗಿದೆ. ನಾವು ಸಮೃದ್ಧ ಭಾರತದತ್ತ ನಮ್ಮ ಪ್ರಯಾಣವನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ, ನಮ್ಮ ಸುಧಾರಣೆಗಳ ಪಥವನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಪ್ರಧಾನಿ ಎಕ್ಸ್ ಮಾಡಿದ್ದಾರೆ.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಭಾರತದ ಬೆಳವಣಿಗೆಯು 2023 ಮತ್ತು 2024 ಎರಡರಲ್ಲೂ ಶೇ.6.3 ರಲ್ಲಿ ಬಲವಾಗಿ ಉಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ, 2023 ಕ್ಕೆ ಶೇ.0.2 ಪಾಯಿಂಟ್‍ನ ಮೇಲ್ಮುಖ ಪರಿಷ್ಕರಣೆಯೊಂದಿಗೆ, ಏಪ್ರಿಲ-ಜೂನ್ ಅವಧಿಯಲ್ಲಿ ನಿರೀಕ್ಷಿತ ಬಳಕೆಗಿಂತ ಬಲವಾದ ಬಳಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಲ್ಡರ್ ಎಕನಾಮಿಕ್ ಔಟ್‍ಲುಕ್ ಹೇಳಿದೆ ಎಂದಿದ್ದಾರೆ.

ಭಾರತದ ಬೆಳವಣಿಗೆಯು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾಕ್ಕಿಂತ ಹೆಚ್ಚಾಗಿರುತ್ತದೆ ಎಂದು ಅಂದಾಜಿಸಲಾಗಿದೆ.