Friday, April 11, 2025
Homeರಾಷ್ಟ್ರೀಯ | Nationalರಾಹುಲ್ 'ಬೆಂಕಿ ಹಚ್ಚುವ ಹೇಳಿಕೆ'ಗೆ ಪ್ರಧಾನಿ ಮೋದಿ ಕಿಡಿ

ರಾಹುಲ್ ‘ಬೆಂಕಿ ಹಚ್ಚುವ ಹೇಳಿಕೆ’ಗೆ ಪ್ರಧಾನಿ ಮೋದಿ ಕಿಡಿ

ಉತ್ತರಖಂಡ ಏ.2- ಬಿಜೆಪಿ ಮೂರನೆ ಬಾರಿಗೆ ಆಯ್ಕೆಯಾದರೆ ಭಾರತಕ್ಕೆ ಬೆಂಕಿ ಹೊತ್ತಿಕೊಳ್ಳಲಿದೆ ಎಂಬ ರಾಹುಲ್ ಗಾಂಧಿ ಹೇಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ಇದು ರಾಹುಲ್ ಗಾಂಧಿ ಅವರ ಪ್ರಜಾಪ್ರಭುತ್ವದ ಭಾಷೆಯೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನ ಶಾಹಿ ಕುಟುಂಬದ ರಾಹುಲ್ ಆಡಿರುವ ಮಾತುಗಳನ್ನು ನೀವು ಒಪ್ಪುತ್ತೀರಾ? ದೇಶಕ್ಕೆ ಬೆಂಕಿ ಹಚ್ಚಲು ಬಿಡುತ್ತೀರಾ? ಈ ಭಾಷೆ ಸ್ವೀಕಾರಾರ್ಹವೇ? ಇದು ಪ್ರಜಾಪ್ರಭುತ್ವ ಭಾಷೆಯೇ? ಇಂತಹ ಮಾತುಗಳನ್ನಾಡುವವರನ್ನು ಶಿಕ್ಷಿಸುವುದಿಲ್ಲವೆ ಎಂದು ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸಂಕುಚಿತ ಮನಸ್ಥಿತಿಯ ಕಾಂಗ್ರೆಸ್ಅನ್ನು ಯಾರೂ ನಂಬುವುದಿಲ್ಲ. ಪ್ರಸ್ತುತ ಜನರನ್ನು ಪ್ರಚೋದಿಸಿ ದೇಶವನ್ನು ಅಸ್ಥಿರತೆಗೆ ಕೊಂಡೊಯ್ಯುವ ಅವರ ಯೋಜನೆ ಫಲಿಸುವುದಿಲ್ಲ ಎಂದು ಗುಡುಗಿದ್ದಾರೆ.

RELATED ARTICLES

Latest News