Tuesday, May 21, 2024
Homeರಾಷ್ಟ್ರೀಯಕ್ರೌಢ್ ಫಂಡಿಂಗ್‍ ಅಭಿಯಾನಕ್ಕೆ ದೇಣಿಗೆ ನೀಡಿದ ರಾಹುಲ್

ಕ್ರೌಢ್ ಫಂಡಿಂಗ್‍ ಅಭಿಯಾನಕ್ಕೆ ದೇಣಿಗೆ ನೀಡಿದ ರಾಹುಲ್

ನವದೆಹಲಿ,ಡಿ.20- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ, ಇದು ಸಾಮರಸ್ಯ ಮತ್ತು ಪ್ರಗತಿಪರ ಭಾರತಕ್ಕೆ ಅವರ ಕೊಡುಗೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ನೀವೆಲ್ಲರೂ ದೇಣಿಗೆ ನೀಡಿ ಮತ್ತು ಭಾರತದ ಆತ್ಮವನ್ನು ಉಳಿಸುವ ಆಂದೋಲನದ ಭಾಗವಾಗಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಎಕ್ಸ್ ಮಾಡಿದ್ದಾರೆ.

ಅವರು ದೇಷ್‍ಗಾಗಿ ದೇಣಿಗೆ ಅಭಿಯಾನಕ್ಕೆ ಕೊಡುಗೆ ನೀಡುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ ಆದರೆ ತಾವು ನೀಡಿದ ದೇಣಿಗೆ ಮೊತ್ತವನ್ನು ಬಹಿರಂಗಪಡಿಸಿಲ್ಲ. ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಅವರನ್ನು ಪಕ್ಷದಿಂದ ಎಷ್ಟು ಹಣ ಸಂಗ್ರಹಿಸಲಾಗುತ್ತದೆ ಎಂದು ಪ್ರಶ್ನಿಸಿದರು ಆಗ ಅವರು ನಿರೀಕ್ಷೆಗಿಂತ ಹೆಚ್ಚು ದೇಣಿಗೆ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಯೂತ್ ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಸಹ ಅದೇ ರೀತಿ ಮಾಡಬೇಕು ಮತ್ತು ಮಹಿಳಾ ಕಾಂಗ್ರೆಸ್ ಮಾಡಬೇಕು. ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ (ಕೊಡುಗೆಯಲ್ಲಿ) ಪ್ರಥಮ ಸ್ಥಾನದಲ್ಲಿರಬೇಕು ಎಂದು ಅವರು ಮನವಿ ಮಾಡಿಕೊಂಡರು.

ಪ್ರತಾಪ್‍ಸಿಂಹರನ್ನು ಏಕೆ ವಿಚಾರಣೆ ಮಾಡಿಲ್ಲ..? : ಕಾಂಗ್ರೆಸ್

ಮಾಕೆನ್ ಅವರು ರಾಹುಲ್‍ಗೆ ಇದುವರೆಗೆ ಮಹಾರಾಷ್ಟ್ರವು ಪ್ರಚಾರಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದೆ, ನಂತರ ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ಅತಿ ಹೆಚ್ಚು ದೇಣಿಗೆ ಸಂಗ್ರವಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ತನ್ನ ದೇಷ್‍ಗಾಗಿ ದೇಣಿಗೆ ಎಂಬ ಕ್ರೌಡ್‍ಫಂಡಿಂಗ್ ಅಭಿಯಾನವನ್ನು ಸೋಮವಾರ ಪ್ರಾರಂಭಿಸಿತು, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮೊದಲ ಕೊಡುಗೆ ನೀಡಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಚಾರದ ಭಾಗವಾಗಿ ಪಕ್ಷಕ್ಕೆ 1.38 ಲಕ್ಷ ದೇಣಿಗೆ ನೀಡಿದ್ದಾರೆ.

RELATED ARTICLES

Latest News