Sunday, July 7, 2024
Homeರಾಷ್ಟ್ರೀಯಸ್ಪೀಕರ್‌ ಹುದ್ದೆಗೆ ಒಮ್ಮತ ಮೂಡಿಸುವ ಹೊಣೆ ರಾಜನಾಥ್‌, ರಿಜಿಜು ಹೆಗಲಿಗೆ

ಸ್ಪೀಕರ್‌ ಹುದ್ದೆಗೆ ಒಮ್ಮತ ಮೂಡಿಸುವ ಹೊಣೆ ರಾಜನಾಥ್‌, ರಿಜಿಜು ಹೆಗಲಿಗೆ

ನವದೆಹಲಿ,ಜೂ.25- ಲೋಕಸಭೆ ಸ್ಪೀಕರ್‌ ಮತ್ತು ಉಪಸಭಾಪತಿ ಹುದ್ದೆಗೆ ಒಮ್ಮತ ಮೂಡಿಸಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರನ್ನು ಸರ್ಕಾರ ಕಣಕ್ಕಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯದ ಕುರಿತು ಬಿಜೆಪಿಯ ಹಿರಿಯ ನಾಯಕರು, ಕಾಂಗ್ರೆಸ್‌‍ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌‍, ಡಿಎಂಕೆ ನಾಯಕ ಎಂಕೆ ಸ್ಟಾಲಿನ್‌ ಮತ್ತು ತಣಮೂಲ ಕಾಂಗ್ರೆಸ್‌‍ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತಿತರ ಉನ್ನತ ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಎನ್‌ಡಿಎ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ ಮತ್ತು ಜನತಾ ದಳ ಯುನೈಟೆಡ್‌ನೊಂದಿಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಲೋಕಸಭಾ ಸ್ಪೀಕರ್‌ ಹ್ದುೆಗೆ ಇಂದು ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲು ಗಡುವು ನೀಡಲಾಗಿದ್ದು, ಚುನಾವಣೆ ಇದ್ದರೆ ನಾಳೆ ನಡೆಯಲಿದೆ. ಇಲ್ಲಿಯವರೆಗಿನ ಎಲ್ಲಾ ಸ್ಪೀಕರ್‌ಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅದು ನಡೆದರೆ ಮೊದಲ ಚುನಾವಣೆಯಾಗಲಿದೆ.

ಬಿಜೆಪಿಯು ಪ್ರಮುಖ ಹ್ದುೆಗೆ ತನ್ನ ಆಯ್ಕೆಯ ಬಗ್ಗೆ ತುಟಿಬಿಚ್ಚಿಲ್ಲ, ಆದರೆ 17 ನೇ ಲೋಕಸಭೆಯಲ್ಲಿ ಸ್ಪೀಕರ್‌ ಆಗಿ ಸೇವೆ ಸಲ್ಲಿಸಿದ ಓಂ ಬಿರ್ಲಾ ಪುನರಾವರ್ತನೆಯಾಗಬಹುದು ಎಂಬ ಗುಸುಗುಸು ಇದೆ. ವಾಸ್ತವವಾಗಿ, ಪರ-ಸಭಾಪತಿಯಾಗಿರುವ ಭರ್ತಹರಿ ಮಹತಾಬ್‌ ಅವರನ್ನೂ ಮುಂಚೂಣಿಯಲ್ಲಿ ನೋಡಲಾಗುತ್ತಿದೆ.

ಗಮನ ಸೆಳೆದಿರುವ ಮತ್ತೊಂದು ಹ್ದುೆ ಡೆಪ್ಯುಟಿ ಸ್ಪೀಕರ್‌ ಹ್ದುೆ. ಈ ಸ್ಥಾನವನ್ನು ಸಾಂಪ್ರದಾಯಿಕವಾಗಿ ಪ್ರತಿಪಕ್ಷಗಳಿಗೆ ನೀಡಲಾಗುತ್ತದೆ. ಆದರೆ, ಬಿಜೆಪಿ ತನ್ನ ಮಿತ್ರಪಕ್ಷವಾದ ಎಐಎಡಿಎಂಕೆಯ ಎಂ ತಂಬಿ ದುರೈ ಅವರನ್ನು 2014ರಲ್ಲಿ ಉಪಸಭಾಪತಿಯಾಗಿ ನೇಮಿಸಿತ್ತು. 2019ರಿಂದ ಆ ಸ್ಥಾನ ಖಾಲಿ ಇದೆ.

16 ಮತ್ತು 17ನೇ ಲೋಕಸಭೆ ಎರಡರಲ್ಲೂ ಕಾಂಗ್ರೆಸ್‌‍ಗೆ ಸಾಕಷ್ಟು ಸಂಖ್ಯಾಬಲ ಇಲ್ಲದ ಕಾರಣ ವಿರೋಧ ಪಕ್ಷದ ನಾಯಕರೇ ಇರಲಿಲ್ಲ. ಆದರೆ ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳು ಉತ್ತಮ ಪ್ರದರ್ಶನ ನೀಡಿದ್ದು, ಕಾಂಗ್ರೆಸ್‌‍ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ ವಿರೋಧ ಪಕ್ಷದ ಮಿತ್ರಪಕ್ಷಗಳ ಬೆಂಬಲದೊಂದಿಗೆ ಪಕ್ಷವು ಉಪಸಭಾಪತಿ ಸ್ಥಾನಕ್ಕಾಗಿ ಒತ್ತಾಯಿಸುತ್ತದೆ.

ವಾಸ್ತವವಾಗಿ, ಕಾಂಗ್ರೆಸ್‌‍ ಮೂಲಗಳ ಪ್ರಕಾರ, ಉಪಸಭಾಪತಿಯು ವಿರೋಧ ಪಕ್ಷದ ಪೀಠದಿಂದ ಇರಬೇಕು ಎಂದು ಖರ್ಗೆ ಅವರು ಈಗಾಗಲೇ ಸಿಂಗ್‌ ಅವರಿಗೆ ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳು ಸಹ ಒಮತವನ್ನು ಬಯಸುತ್ತಿರುವಾಗ, ಆರೋಗ್ಯಕರ ಸಂಪ್ರದಾಯಗಳನ್ನು ಅನುಸರಿಸಬೇಕು ಎಂದು ಕಾಂಗ್ರೆಸ್‌‍ ಮುಖ್ಯಸ್ಥರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News