Thursday, July 4, 2024
Homeರಾಜ್ಯವಿಕೃತವಾಗಿ ಪತಿಯನ್ನು ಕೊಂದವರ ಬಗ್ಗೆ ರೇಣುಕಾಸ್ವಾಮಿ ಅವರ ಪತ್ನಿ ಹೇಳಿದ್ದೇನು..?

ವಿಕೃತವಾಗಿ ಪತಿಯನ್ನು ಕೊಂದವರ ಬಗ್ಗೆ ರೇಣುಕಾಸ್ವಾಮಿ ಅವರ ಪತ್ನಿ ಹೇಳಿದ್ದೇನು..?

ಬೆಂಗಳೂರು,ಜೂ.12- ನನ್ನ ಪತಿಯನ್ನು ಮೋಸದಿಂದ ಅಪಹರಿಸಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲೆ ಮಾಡಿರುವ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಅವರ ಪತ್ನಿ ಸಹನಾ ನೊಂದು ನುಡಿದಿದ್ದಾರೆ.
ನಾನು ಐದು ತಿಂಗಳ ಗರ್ಭಿಣಿ, ಮಗು ಹುಟ್ಟಿದ ಮೇಲೆ ತಂದೆ ಯಾರೆಂದು ಹೇಳಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

ಶನಿವಾರ ಫೋನ್‌ ಮಾಡಿ ಊಟಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಸಂಜೆಯಾದರೂ ಬಾರದಿದ್ದಾಗ ಫೋನ್‌ ಮಾಡಿದೆ. ಆದರೆ 7.30ರಲ್ಲಿ ಸ್ವಿಚ್‌ ಆಫ್‌ ಆಗಿತ್ತು. ನನ್ನ ಪತಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದು ವಿಕೃತವಾಗಿ ಕೊಲೆ ಮಾಡಿದ್ದಾರೆ. ನನ್ನ ಪತ್ನಿ ಗರ್ಭಿಣಿ ಎಂದು ಹೇಳಿದರೂ ಅವರಿಗೆ ಕನಿಕರ ಬಂದಿಲ್ಲ. ಹೀನಾಯವಾಗಿ ಹೊಡೆದು ಸಾಯಿಸಿದ್ದಾರೆ. ನನ್ನ ಮುಂದಿನ ಬದುಕು ಹೇಗೆ ಎಂಬುದೇ ಚಿಂತೆಯಾಗಿದೆ ಎಂದು ಸಹನಾ ಕಣ್ಣೀರು ಹಾಕಿದ್ದಾರೆ.

ನನ್ನ ಗಂಡ ತಪ್ಪು ಮಾಡಿದ್ದರೆ ಬುದ್ದಿ ಹೇಳಿ ಬಿಟ್ಟುಬಿಡಬಹುದಿತ್ತು. ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದಿತ್ತು. ನನ್ನ ಪತಿಯನ್ನು ಕೊಲೆ ಮಾಡಿರುವ ಆರೋಪಿಗಳು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಎಲ್ಲರಿಗೂ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.

ಪತಿಯ ಕೊಲೆಯಿಂದಾಗಿ ನಮ ಜೀವನ ಹಾಳಾಗಿದೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬಾರದು. ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಪತಿಯ ಮೃತದೇಹದ ಮುಂದೆ ನೋವು ಹೇಳಿಕೊಂಡಿದ್ದಾರೆ.

ಸೊಸೆಗೆ ಉದ್ಯೋಗ ಕೊಡಿ:
ನನ್ನ ಮಗನನ್ನು ಬೆಂಗಳೂರಿಗೆ ಕರೆದೊಯ್ದು ಕೊಲೆ ಮಾಡಿರುವ ಎಲ್ಲರಿಗೂ ತಕ್ಷ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಕಣ್ಣೀರು ಹಾಕುತ್ತಾ, ನನ್ನ ಸೊಸೆಗೆ ಪರಿಹಾರ ನೀಡಬೇಕು. ಸರ್ಕಾರಿ ಉದ್ಯೋಗ ಕೊಡಿ ಎಂದು ಅಲವತ್ತುಕೊಂಡಿದ್ದಾರೆ.

ವಯಸ್ಸಾದ ನಮ ಕುಟುಂಬಕ್ಕೆ ಮಗನೇ ಆಧಾರವಾಗಿದ್ದ. ಈಗ ನಾವು, ನಮ ಸೊಸೆ ಕಷ್ಟಪಡುವಂತಾಗಿದೆ. ನನ್ನ ಸೊಸೆಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಒದಗಿಸಬೇಕು, ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕೆಂದರು.

RELATED ARTICLES

Latest News