Tuesday, May 13, 2025
Homeರಾಜ್ಯಕನ್ನಡಿಗರ ನೆರವಿಗಾಗಿ ಶ್ರೀನಗರದಲ್ಲಿ ಸಂತೋಷ್‌ ಲಾಡ್‌

ಕನ್ನಡಿಗರ ನೆರವಿಗಾಗಿ ಶ್ರೀನಗರದಲ್ಲಿ ಸಂತೋಷ್‌ ಲಾಡ್‌

Santosh Lad in Srinagar to help Kannadigas in Terrorist Attack

ಕೊಪ್ಪಳ, ಏ.23- ಕಾಶೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಮೃತಪಟ್ಟವರ ಮೃತದೇಹಗಳನ್ನು ಗುರುತಿಸಲು ಕನ್ನಡಿಗರ ನೆರವಿಗಾಗಿ ಸಚಿವ ಸಂತೋಷ್‌ ಲಾಡ್‌ ಶ್ರೀನಗರಕ್ಕೆ ತಲುಪಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಲಾಡ್‌ ಅವರು ಕಾಶೀರದಲ್ಲಿ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆಗೆ ತೆರಳಿದ್ದಾರೆ.ಪಹಲ್ಗಾಮ್ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ನೆರವಾಗಿದ್ದಾರೆ.

ಮೃತದೇಹಗಳು ನಿಮ ಸಂಬಂಧಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿಯನ್ನು ಸಚಿವರು ಕಲೆ ಹಾಕುತ್ತಿದ್ದಾರೆ. ಯಾವ ಮೃತದೇಹಗಳನ್ನು ಈಗಾಗಲೇ ನೋಡಲಾಗಿದೆ ಎಂಬುದನ್ನೂ ಸಹ ಅವರು ತಪಾಸಣೆ ಮಾಡುತ್ತಿದ್ದಾರೆ. ಮೃತದೇಹಗಳನ್ನು ಇರಿಸಲಾಗಿರುವ ಪೆಟ್ಟಿಗೆಗಳ ಮೇಲೆ ದೂರವಾಣಿ ಕರೆಗಳನ್ನು ನಮೂದಿಸಲಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ಸ್ವತಃ ಸಂತೋಷ್‌ ಲಾಡ್‌ ಅವರೇ ಮಾಹಿತಿ ನೀಡುತ್ತಿದ್ದಾರೆ.

ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ತೊಂದರೆಗೊಳಗಾದವರಿಗೆ ಅಗತ್ಯ ನೆರವನ್ನು ನೀಡಲಾಗುವುದು. ನಮ ಸರ್ಕಾರ ಏಲ್ಲಾ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಲಾಡ್‌ ಅವರು ತಿಳಿಸಿದ್ದಾರೆ.

ಇಬ್ಬರ ಗುರುತು ಪತ್ತೆ:
ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗ ಮತ್ತು ರಾಣೇಬೆನ್ನೂರಿನ ಇಬ್ಬರು ಪ್ರವಾಸಿಗರ ಗುರುತು ಪತ್ತೆಯಾಗಿದ್ದು, ಇನ್ನೂ ಒಬ್ಬರ ಗುರುತು ಸಿಗಬೇಕಿದೆ.

ಕೊಪ್ಪಳದ 19 ಮಂದಿ ಸುರಕ್ಷಿತ:
ಕಾಶೀರದ ಶ್ರೀನಗರದಲ್ಲಿ ಕೊಪ್ಪಳದ 19 ಮಂದಿ ನಿನ್ನೆಯಷ್ಟೇ ಮುಂಬೈನಿಂದ ಶ್ರೀನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದು, ಅವರಿಗೆ ಯಾವುದೇ ತೊಂದರೆ ಇಲ್ಲ ಎಸ್ಪಿ ಡಾ. ರಾಮ್‌ ಎಲ್‌. ಅರಸಿದ್ದಿ ಹೇಳಿಕೆ ನೀಡಿದ್ದಾರೆ.

ಕೊಪ್ಪಳದ ಕಾಂಗ್ರೆಸ್‌‍ ಮುಖಂಡರಾದ ಕಾಟನ್‌ ಪಾಷಾ, ಶರಣಪ್ಪ, ಸಜ್ಜನ್‌ ಶಿವಕುಮಾರ್‌ ಶೆಟ್ಟರ್‌ ಹಾಗೂ ಮತ್ತೊಬ್ಬರ ಜೊತೆಗೆ ಪ್ರಯಾಣ ಬೆಳೆಸಿದ್ದ ಕುಟುಂಬಸ್ಥರು ನಿನ್ನೆ ಸಾಯಂಕಾಲ ಶ್ರೀನಗರಕ್ಕೆ ತಲುಪಿದ್ದಾರೆ.ಈಗ ಮರಳಿ ಮುಂಬೈ ಅಥವಾ ದೆಹಲಿಗೆ ತಲುಪಲು ವಿಮಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

RELATED ARTICLES

Latest News