ಶಿವಮೊಗ್ಗ, ಜೂ.22- ತೋಟದ ಮನೆಯಲ್ಲಿ ಮದ್ಯದ ಪಾರ್ಟಿ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಗೌತಮ ನಾಯಕ(22) ಹಾಗೂ ಸಂಜೀವ(22) ಎಂದು ಗುರುತಿಸಲಾಗಿದೆ. ಸುಮಾರು 10 ಮಂದಿ ಸ್ನೇಹಿತರ ತಂಡ ಎಡವಾಲ ಗ್ರಾಮದಲ್ಲಿರುವ ತೋಟದ ಮನೆಗೆ ಬಂದು ಅಲ್ಲಿ ರಾತ್ರಿ ಪಾರ್ಟಿ ನಡೆಸಿದರು.
ತಡರಾತ್ರಿ ಮದ್ಯದ ನಶೆಯಲ್ಲಿ ಒಬ್ಬ ಕೃಷಿ ಹೊಂಡದ ಬಳಿ ಹೋಗಿ ನೀರಿಗೆ ಬಿದಿದ್ದಾನೆ. ಇದನ್ನು ಕಂಡು ಮತ್ತೊಬ್ಬ ಆತನನ್ನು ರಕ್ಷಿಸಲು ನೀರಿಗಿಳಿದು ಆತನೂ ಸಹ ಮುಳುಗಿ ಸಾವನ್ನಪ್ಪಿದ್ದಾನೆ.
ಹೊಂಡದಲ್ಲಿ ಬಿದ್ದವರು ಏನಾದರು ಎಂದು ನೋಡುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಆತಂಕಗೊಂಡ ಇತರ ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಾವಿಸಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆದಿದೆ.
- ಮಾಜಿ ಪ್ರಧಾನಿ ದೇವೇಗೌಡರಿಗೆ ಶ್ರೀಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ
- ಡಿ.ಕೆ.ಶಿವಕುಮಾರ್ ಸಿಎಂ ಕನಸು ಕಾಣಬೇಕಷ್ಟೇ..! : ಹೆಚ್ಡಿಕೆ ವ್ಯಂಗ್ಯ
- ಭ್ರಷ್ಟಾಚಾರ ಬಯಲಿಗೆಳೆದ ಶಾಸಕರಿಗೆ ಬೆದರಿಕೆ : ವಿಜಯೇಂದ್ರ ಗಂಭೀರ ಆರೋಪ
- ಸಂಚಲನ ಮೂಡಿಸಿದೆ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ
- ಅಕ್ರಮ ಗಣಿ ಪ್ರಕರಣಗಳ ಕುರಿತು ಎಚ್.ಕೆ. ಪಾಟೀಲರ ಪತ್ರಕ್ಕೆ ಸಿಎಂ ಸ್ಪಂದನೆ ಏನು.. ?