Monday, July 8, 2024
Homeಬೆಂಗಳೂರುಅಪ್ಪ-ಅಮ್ಮನ ಜಗಳದಲ್ಲಿ ಕೊಲೆಯಾದ ಸಾಫ್ಟವೇರ್‌ ಎಂಜಿನಿಯರ್‌

ಅಪ್ಪ-ಅಮ್ಮನ ಜಗಳದಲ್ಲಿ ಕೊಲೆಯಾದ ಸಾಫ್ಟವೇರ್‌ ಎಂಜಿನಿಯರ್‌

ಬೆಂಗಳೂರು, ಜೂ.5 – ಕೌಟುಂಬಿಕ ವಿಚಾರವಾಗಿ ಅಪ್ಪ-ಅಮ್ಮನ ನಡುವೆ ಜಗಳ ನಡೆಯುತ್ತಿದ್ದಾಗ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ ಮಗನಿಗೆ ತಂದೆಯೇ ಚಾಕುವಿನಿಂದ ಚುಚ್ಚಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಸಾಫ್ಟವೇರ್‌ ಎಂಜನಿಯರ್‌ ಯಶವಂತ ಕುಮಾರ (25) ಅಪ್ಪ-ಅಮ್ಮನ ಜಗಳದಲ್ಲಿ ಬಲಿಯಾದ ನತದೃಷ್ಟ. ಜರಗನಹಳ್ಳಿ ನಿವಾಸಿ, ಲಾರಿ ಚಾಲಕ ಬಸವರಾಜು ಅವರು ಬೆಳಿಗ್ಗೆ 9 ಗಂಟೆ ಸುಮಾರಿನಲ್ಲಿ ಕೌಟುಂಬಿಕ ವಿಚಾರವಾಗಿ ಪತ್ನಿ ಜೊತೆ ಜಗಳವಾಡುತ್ತಿದ್ದರು, ಆ ಸಂದರ್ಭದಲ್ಲಿ ಮಗ ಯಶವಂತ ಕುಮಾರ ಮನೆಯಲ್ಲಿದ್ದರು.

ಅಪ್ಪ-ಅಮ್ಮನ ಜಗಳವನ್ನು ಬಿಡಿಸಲು ಮಧ್ಯೆ ಹೋದಾಗ ಕೈಯಲ್ಲಿದ್ದ ಚಾಕುವಿನಿಂದ ಅಪ್ಪನೇ ಯಶವಂತ ಕುಮಾರನ ಕುತ್ತಿಗೆಗೆ ಇರಿದಿದ್ದಾರೆ. ಆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದುದ್ದನ್ನು ಗಮನಿಸಿ ಅಪ್ಪನೇ ಮಗನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿಡಲಾಗಿದೆ. ಪುಟ್ಟೇನಹಳ್ಳಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News