Saturday, July 27, 2024
Homeಬೆಂಗಳೂರುಮಗನನ್ನೇ ಕೊಂದ ತಂದೆ

ಮಗನನ್ನೇ ಕೊಂದ ತಂದೆ

ಬೆಂಗಳೂರು,ಮೇ 18- ಹಣಕಾಸು ವಿಚಾರಕ್ಕೆ ತಂದೆ-ಮಗನ ನಡುವೆ ಜಗಳವಾಗಿದ್ದು, ರಾತ್ರಿ ಮಗ ಮಲಗಿದ್ದಾಗ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಲಕ್ಕೋಜನಹಳ್ಳಿ ನಿವಾಸಿ ಭಾಸ್ಕರ (31) ತಂದೆಯಿಂದಲೇ ಕೊಲೆಯಾದ ಮಗ. ಹಣಕಾಸು ವಿಚಾರವಾಗಿ ಆಗಾಗ್ಗೆ ತಂದೆ ಕೃಷ್ಣಪ್ಪ ಅವರೊಂದಿಗೆ ಭಾಸ್ಕರ ಜಗಳವಾಡುತ್ತಿದ್ದನು. ರಾತ್ರಿಯೂ ಸಹ ಇದೇ ವಿಚಾರಕ್ಕೆ ಜಗಳವಾಗಿದೆ. ನಂತರ ಮಗ ಊಟ ಮಾಡಿ ಮಲಗಿದ್ದಾನೆ.

ಜಗಳದಿಂದ ಕೋಪಗೊಂಡಿದ್ದ ಕೃಷ್ಣಪ್ಪ ಅವರು ಮಲಗಿದ್ದ ಮಗನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಸುದ್ದಿ ತಿಳಿದು ರಾಮನಗರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News