ಚಿಕ್ಕಮಗಳೂರು, ಜು.31 – ಕುಡಿದ ಮತ್ತಿನಲ್ಲಿ ಪುತ್ರನೇ ತನ್ನ ತಾಯಿಯನ್ನು ಬೆಂಕಿ ಹಚ್ಚಿ ಪಕ್ಕದಲ್ಲೇ ಮಲಗಿದ್ದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಅರೆನೂರು ಸಮೀಪದ ಅಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಭವಾನಿ ಮೃತಪಟ್ಟವರು.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪವನ್ ತಾಯಿಯ ಜೊತೆ ಅಕ್ಕಿಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಕಂಠಪೂರ್ತಿ ಕುಡಿದುಬಂದು ತಾಯಿಯ ಜೊತೆ ವಿನಾಕಾರಣ ಜಗಳ ತೆಗೆದಿದ್ದು, ಆಕೆಗೆ ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ, ಪ್ರಜ್ಞಾಹೀನನಾಗಿ ಪಕ್ಕದಲ್ಲೇ ಮಲಗಿದ್ದನು.
ಮಹಿಳೆಯ ಚೀರಾಟ ಕೇಳಿ ಅಕ್ಕಪಕ್ಕದವರು ದೌಡಾಯಿಸಿ ಬಂದು ನೋಡುವಷ್ಟರಲ್ಲೇ ಭವಾನಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು. ವಿಷಯ ತಿಳಿದ ಕೂಡಲೇ ಆಲ್ಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಕೊಂದ ಪಾಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-09-2025)
- ಮಕ್ಕಳಿಗೆ ಜೀವನ ಮೌಲ್ಯದ ಜೊತೆಗೆ ಸಂಪ್ರದಾಯ ಕಲಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ: ಜಯೇಂದ್ರ ಪುರಿ ಮಹಾಸ್ವಾಮೀಜಿ
- ವಿಶ್ವದ ಅತಿದೊಡ್ಡ IMECE ಇಂಡಿಯಾ ಸಮಾವೇಶ ಯಶಸ್ವಿ
- ಮನೆಗಳ್ಳತನ : ಇಬ್ಬರು ರೌಡಿ ಸೇರಿ ಮೂವರ ಸೆರೆ, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
- ಮುಸಲ್ಮಾನರ ವಿಷಯಗಳು ಇಲ್ಲದಿದ್ದರೆ ಬಿಜೆಪಿ ರಾಜಕೀಯ ಮಾಡಲು ಸಾಧ್ಯವಿಲ್ಲ : ಸಂತೋಷ್ಲಾಡ್ ಕಿಡಿ