ಬೆಂಗಳೂರಿನ ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಾಲಕ

ಬೆಂಗಳೂರು.17- ಆಟವಾಡುತ್ತಿದ್ದಾಗ ಮೂರು ವರ್ಷದ ಮಗು ರಾಜಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿಹೊಗಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಬೀರ್ ರಾಜಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿರುವ ಮಗು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ವರ್ತೂರು ಬಳಿ ಇರುವ ಶೋಭ ಗ್ರೀನ್ ಆಪಾರ್ಟ್‍ಮೆಂಟ್‍ನ ಬಳಿಯ ಶೆಡ್‍ವೊಂದರಲ್ಲಿ ಆಹಾರ ವಿತರಿಸುವ ಝುಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‍ರವರ ಪುತ್ರ ಕಬೀರ್ ಹಾಗೂ ಇನ್ನೊಬ್ಬ ಬಾಲಕ ಆಟವಾಡಲು ರಾಜಕಾಲುವೆ ಬಳಿ ಹೋಗಿದ್ದರು. ನಿನ್ನೆ ಸಂಜೆ ಜೋರು ಮಳೆ ಬಂದ […]

ತುಂಗಭದ್ರಾ ಕಾಲುವೆಗೆ ಆಟೋ ಬಿದ್ದು ಇಬ್ಬರು ಕಾರ್ಮಿಕರ ಸಾವು

ಬಳ್ಳಾರಿ, ಸೆ.14- ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ ನಾಲ್ವರು ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಕೊಳಗಲ್ ಗ್ರಾಮದ ಬಳಿಯ ತುಂಗ ಭದ್ರಾ ಕಾಲುವೆ ಬಳಿ ಸಂಭವಿಸಿದೆ.ದುರ್ಗವ್ವ (40), ನಿಂಗಮ್ಮ (38) ಮೃತ ದುರ್ದೈವಿಗಳು. ಆಟೋ ಚಾಲಕ ಭೀಮ ಸೇರಿದಂತೆ 8 ಜನ ಕೂಲಿ ಕಾರ್ಮಿಕರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಘಟನೆಯಲ್ಲಿ ಯರ್ರಮ್ಮ ಹಾಗೂ ಹೇಮಾವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು […]