ಕಾಂಗ್ರೆಸ್ನಿಂದ ಮಾತ್ರ ಜನ ಕಲ್ಯಾಣ ಸಾಧ್ಯ : ಚಲುವರಾಯಸ್ವಾಮಿ

ಬೆಂಗಳೂರು,ಮಾ.6- ನಾಗಮಂಗಲದ ಜನರ ಗೌರವವನ್ನು ಹೆಚ್ಚಿಸಿದ್ದೇನೆ ಹೊರೆತು ಯಾವುದೇ ಚ್ಯುತಿ ತಂದಿಲ್ಲ ಸದಾಕಾಲ ಜನರ ಸೇವೆಯಲ್ಲು ತೊಡಗಿದ್ದವನು ನಾನು ಎಂದು ಮಾಜಿ ಸಚಿವ ಹಾಗೂ ನಾಗಮಂಗಲ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಹೇಳಿದರು. ಬೆಂಗಳೂರಿನ ನಂದಿ ಲಿಂಕ್ ಮೈದಾನದಲ್ಲಿ ನಡೆದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಹಾಗೂ ಕೊಪ್ಪ ಹೋಬಳಿಯ ಬೆಂಗಳೂರು ನಿವಾಸಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಲವರು ಅಪಪ್ರಚಾರ ನಡೆಸಿ ನನ್ನ ವರ್ಚಸ್ಸನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಮಾಡಿದ ಸೇವೆಯನ್ನು […]