Sunday, September 8, 2024
Homeರಾಷ್ಟ್ರೀಯ | Nationalಇಸ್ರೇಲ್‍ನಲ್ಲಿ ಸಿಲುಕಿರುವ ತನ್ನ ಪತ್ನಿಯನ್ನು ಕರೆತರುವಂತೆ ಪ್ರೊಫೆಸರ್ ಮನವಿ

ಇಸ್ರೇಲ್‍ನಲ್ಲಿ ಸಿಲುಕಿರುವ ತನ್ನ ಪತ್ನಿಯನ್ನು ಕರೆತರುವಂತೆ ಪ್ರೊಫೆಸರ್ ಮನವಿ

ತಿರುಚಿರಾಪಳ್ಳಿ, ಅ 14 (ಪಿಟಿಐ) ಇಲ್ಲಿನ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ (ಟಿಎನ್‍ಎಯು) ಸಹ ಪ್ರಾಧ್ಯಾಪಕರೊಬ್ಬರು ಇಸ್ರೇಲ್‍ನಲ್ಲಿ ಎರಡು ತಿಂಗಳ ತರಬೇತಿ ಕಾರ್ಯಕ್ರಮವೊಂದರಲ್ಲಿ ಸಂಘರ್ಷ ವಲಯದಲ್ಲಿ ಸಿಲುಕಿಕೊಂಡಿದ್ದು, ಆಕೆಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತನ್ನಿ ಎಂದು ಅದೇ ವಾರ್ಸಿಟಿಯಲ್ಲಿ ಎಚ್‍ಒಡಿ ಆಗಿರುವ ಅವರ ಪತಿ ಮನವಿ ಮಾಡಿಕೊಂಡಿದ್ದಾರೆ.

ದಕ್ಷಿಣ ಇಸ್ರೇಲ್‍ನ ದೊಡ್ಡ ಮರುಭೂಮಿ ಪ್ರದೇಶವಾದ ದಿ ನೆಗೆವ್‍ನಲ್ಲಿ ಸಹ ಪ್ರಾಧ್ಯಾಪಕರಾದ ರಾಧಿಕಾ ಅವರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ, ಏಕೆಂದರೆ ಈ ಪ್ರದೇಶವು ಗಾಜಾಕ್ಕೆ ಸಮೀಪದಲ್ಲಿದೆ ಎಂದು ಟಿಎನ್‍ಎಯುನ ವಿಭಾಗದ ಮುಖ್ಯಸ್ಥ ಹಾಗೂ ರಾ„ಕಾ ಪತಿ ಟಿ ರಮೇಶ್ ಹೇಳಿಕೊಂಡಿದ್ದಾರೆ.

ಶನಿವಾರದಿಂದ ಮೂರು ದಿನಗಳ ಕಾಲ ಅವಳು ಆಶ್ರಯದಲ್ಲಿ ರಕ್ಷಣೆ ಪಡೆಯಬೇಕಾಯಿತು, ಬಾಂಬ್ ಸ್ಪೋಟದ ಮೊದಲು ಅವಳು ಸೈರನ್ ಅನ್ನು ಕೇಳಿದಳು ಮತ್ತು ಇಸ್ರೇಲ್ ಸರ್ಕಾರವು ಘೋಷಣೆ ಮಾಡಿದ ನಂತರ ನೆಗೆವ್‍ನಲ್ಲಿರುವ ತನ್ನ ಕೋಣೆಗೆ ಮರಳಿದಳು ಎಂದು ರಮೇಶ್ ಪಿಟಿಐಗೆ ತಿಳಿಸಿದರು.

ಬೆಂಗಳೂರಿಗೆ ಸುರಂಗ ಮಾರ್ಗ ಅಗತ್ಯವೇ.. ? ಯೋಜನೆ ಹಿಂದೆ ಹಲವು ಅನುಮಾನ

ಪ್ರಸ್ತುತ, ರಾ„ಕಾ ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಗುತ್ತಿದೆ ಎಂದು ರಮೇಶ್ ಹೇಳಿದರು ಮತ್ತು ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ನಡುವಿನ ಯುದ್ಧವು ತನ್ನ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ಹೇಳಿದರು. ಅವರು ಮನೆಗೆ ಮರಳಲು ತುಂಬಾ ಉತ್ಸುಕರಾಗಿದ್ದಾರೆ. ಮತ್ತು ಆತಂಕದಲ್ಲಿರುವ ನಮ್ಮ 13 ವರ್ಷದ ಮಗ, ತನ್ನ ತಾಯಿ ಸುರಕ್ಷಿತವಾಗಿ ಮನೆಗೆ ಮರಳುವುದನ್ನು ನೋಡಲು ಬಯಸುತ್ತಿದ್ದಾನೆ ಎಂದು ಅವರು ಹೇಳಿದರು.

ಕೃಷಿ ವಿಜ್ಞಾನದಲ್ಲಿ ಪಿಎಚ್‍ಡಿ ಪಡೆದಿರುವ ರಾ„ಕಾ ಅವರು ಬೆನ್-ಗುರಿಯನ್ ವಿಶ್ವವಿದ್ಯಾಲಯದಲ್ಲಿ ಭಾರತ ಸರ್ಕಾರ ಪ್ರಾಯೋಜಿತ ಎರಡು ತಿಂಗಳ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ 23 ರಂದು ಇಸ್ರೇಲ್‍ಗೆ ತೆರಳಿದರು. ಅವರು ಮತ್ತು ಅವರ ಪತಿ ಇಬ್ಬರೂ ಯುದ್ಧ ಪ್ರಾರಂಭವಾದಾಗಿನಿಂದ ತಮಿಳುನಾಡು ಮತ್ತು ಕೇಂದ್ರದ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ವಾಟ್ಸ್‍ಆ್ಯಪ್ ಸಂದೇಶಗಳಲ್ಲಿ ಪತ್ನಿಯ ಸಂಕಷ್ಟದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ರಮೇಶ್ ಹೇಳಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಈಗಾಗಲೇ ಆಕೆಯನ್ನು ಸಂಪರ್ಕಿಸಿದೆ ಮತ್ತು ಆಕೆಯ ಕೋರಿಕೆಯನ್ನು ಶೀಘ್ರದಲ್ಲಿಯೇ ಪ್ರಕ್ರಿಯೆಗೊಳಿಸುವುದಾಗಿ ಭರವಸೆ ನೀಡಿದೆ ಎಂದು ಅವರು ಹೇಳಿದರು.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್‍ನಿಂದ ನಾಗರಿಕರನ್ನು ವಾಪಸು ಕರೆತರಲು ಭಾರತ ಸರ್ಕಾರವು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸುತ್ತಿದ್ದಂತೆ, ತಮಿಳುನಾಡು ಸರ್ಕಾರವು ಅಕ್ಟೋಬರ್ 12 ರಂದು ಮೊದಲ ವಿಮಾನದಲ್ಲಿ ರಾಜ್ಯದ ಸುಮಾರು 21 ಜನರು ನವದೆಹಲಿಗೆ ಬಂದಿದ್ದಾರೆ ಎಂದು ತಿಳಿಸಿದೆ.

ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಅಂಬಿಕಾಪತಿಯ ಮಂಚದ ಖಜಾನೆ

ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಉಲ್ಲೇಖಿಸಿ, ಕೇಂದ್ರ ಮತ್ತು ಭಾರತೀಯ ರಾಯಭಾರ ಕಚೇರಿ ಅ„ಕಾರಿಗಳ ಮೂಲಕ ಇಸ್ರೇಲ್‍ನಲ್ಲಿ ಸಿಲುಕಿರುವ ಎಲ್ಲಾತಮಿಳರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

Latest News