ನಿತ್ಯ ನೀತಿ : ಹಣವಿದ್ದರೆ ಏನು ಬೇಕಾದರೂ ಖರೀದಿಸಬಹುದು. ಆದರೆ, ಇನ್ನೊಬ್ಬರ ಹೃದಯದಲ್ಲಿ ಜಾಗ ಖರೀದಿಸಲು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಹಣವಲ್ಲ, ನಮ ಉತ್ತಮವಾದ ವ್ಯಕ್ತಿತ್ವ.
ಪಂಚಾಂಗ : ಶುಕ್ರವಾರ, 01-08-2025
ವಿಶ್ವಾವಸುನಾಮ ಸಂವತ್ಸರ / ದಕ್ಷಿಣಾಯನ / ಸೌರ ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಸ್ವಾತಿ / ಯೋಗ: ಶುಭ / ಕರಣ: ವಿಷ್ಟಿ
ಸೂರ್ಯೋದಯ -ಬೆ.06.05
ಸೂರ್ಯಾಸ್ತ – 06.47
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಉದ್ಯೋಗದಲ್ಲಿ ಹೆಚ್ಚು ಒತ್ತಡ. ಆರ್ಥಿಕ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಾಗಲಿದೆ.
ವೃಷಭ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.
ಮಿಥುನ: ಹಣ ಹೇಗೆ ವಿನಿಯೋಗವಾಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ಕಟಕ: ಸಹಕಾರ ಮನೋಭಾವದಿಂದ ನೆಮ್ಮದಿ ಸಿಗಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.
ಸಿಂಹ: ಅನಿರೀಕ್ಷಿತ ಧನಾಗಮನ. ವಿದ್ಯಾಭ್ಯಾಸ ದಲ್ಲಿ ಮಕ್ಕಳು ಪ್ರಗತಿ ಸಾಧಿಸುವರು.
ಕನ್ಯಾ: ಆದಾಯಕ್ಕಿಂತ ಖರ್ಚು ಹೆಚ್ಚು. ಹಣಕಾಸು ತೊಂದರೆ ನಿವಾರಣೆಯಾಗಲಿದೆ.
ತುಲಾ: ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ನಿವೇಶನ ಖರೀದಿಸುವಿರಿ.
ವೃಶ್ಚಿಕ: ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರಬಹುದು.
ಧನುಸ್ಸು: ಹಣಕಾಸು ಸಮಸ್ಯೆಯಿದ್ದರೂ ಹೇಗಾದರೂ ಹಣ ಹೊಂದಾಣಿಕೆಯಾಗುತ್ತದೆ.
ಮಕರ: ಅನವಶ್ಯಕ ವಿಚಾರಗಳನ್ನು ಚಿಂತೆ ಮಾಡಿ ಮಾನಸಿಕ ಕಿರಿಕಿರಿ ಅನುಭವಿಸುವಿರಿ.
ಕುಂಭ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಮೀನ: ಸಹೋದ್ಯೋಗಿಗಳಿಂದ ತೊಂದರೆ. ಆಕಸ್ಮಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.
- ಸರ್ಕಾರ ಸ್ವತ್ತುಗಳಲ್ಲಿ ಸಂಘ ಚಟುವಟಿಕೆಗೆ ನಿರ್ಬಂಧ : ಮೇಲ್ಮನವಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
 - ಕ್ರೀಡಾಪಟುಗಳ ಉತ್ತೇಜನಕ್ಕೆ ಒಲಿಂಪಿಕ್ ಪದಕ ಯೋಜನೆ ಆರಂಭ
 - ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪರಿಹಾರೋಪಾಯ ರೂಪಿಸುವಂತೆ ಆಯುಕ್ತರ ಸೂಚನೆ
 - ಇದೇ 19 ರಂದು ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಅಕ್ಕ ಕಾರ್ಯಪಡೆಗೆ ಚಾಲನೆ
 - ಇನ್ಫೋಸಿಸ್ ಉದ್ಯೋಗಿ ಕೊಲೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಅಜೀವ ಕಾರಾಗೃಹ ಶಿಕ್ಷೆ
 
