ನಿತ್ಯ ನೀತಿ: ನಾನು, ನನ್ನಿಂದಲೇ ಎಂಬ ಅಹಂ ಹೆಚ್ಚಿದಾಗ ಸ್ಮಶಾನದಲ್ಲಿ ಸುತ್ತಾಡಿ ಬರಬೇಕಂತೆ. ಯಾಕೆಂದ್ರೆ, ನಾನು, ನನ್ನಿಂದಲೇ ಎಂದು ಮೆರೆದವರೆಲ್ಲ ಮಣ್ಣಾಗಿರುವುದು ಅಲ್ಲೇ..!
ಪಂಚಾಂಗ : ಭಾನುವಾರ, 09-11-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ /ಮಾಸ: ಕಾರ್ತಿಕ / ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ:ಆರಿದ್ರಾ / ಯೋಗ: ಸಿದ್ಧ / ಕರಣ: ಕೌಲವ
ಸೂರ್ಯೋದಯ : ಬೆ.06.17
ಸೂರ್ಯಾಸ್ತ : 5.52
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ಉದ್ಯೋಗದಾತರು ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವರು.
ವೃಷಭ: ರಾಜಕೀಯ ಪ್ರವೇಶಿಸಲು ಇದು ಸಕಾಲ. ಆತ್ಮ ವಿಶ್ವಾಸದ ಕೊರತೆ ಕಾಡಲಿದೆ.
ಮಿಥುನ: ಹಣ ನಿಮ್ಮ ಮೂಲಕ ಸುಲಭವಾಗಿ ಜಾರಿ ಹೋದರೂ ನಿಮ್ಮ ಅದೃಷ್ಟದಿಂದ ನಿಮಗೆ ಸುಲಭವಾಗಿ ದೊರಕುವಂತೆ ಮಾಡುತ್ತದೆ.
ಕಟಕ: ಹವಾಮಾನ ವೈಪರೀತ್ಯದಿಂದಾಗಿ ದೂರ ಪ್ರಯಾಣ ರದ್ದು ಮಾಡಬೇಕಾಗಬಹುದು.
ಸಿಂಹ: ದುಡುಕು ಮಾತು ಗಳನ್ನಾಡದಿರಿ. ಆಟಗಾರರಿಗೆ ನಿರೀಕ್ಷಿತ ಫಲ ಸಿಗಲಿದೆ.
ಕನ್ಯಾ: ಉಪನ್ಯಾಸಕರಿಗೆ ಶುಭ ದಿನ. ಕಲಾವಿದರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.
ತುಲಾ: ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮವಾಗಿರುವುದು.
ವೃಶ್ಚಿಕ: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.
ಧನುಸ್ಸು: ತೈಲ ಮಾರಾಟದಿಂದ ಲಾಭ ಸಿಗಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ.
ಮಕರ: ಮಧುಮೇಹದಂಥ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ.
ಕುಂಭ: ಬದುಕಿನಲ್ಲಿ ತಿರುವು ಪಡೆಯುವಿರಿ.
ಮೀನ: ಹಿಂಜರಿಕೆ ಮತ್ತು ಭಯದ ಸ್ವಭಾವದಿಂದ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
