Thursday, September 19, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2024)

Horoscope

ನಿತ್ಯ ನೀತಿ : ಮನಸ್ಸೊಂದಿದ್ದರೆ ಮಾರ್ಗವಿದೆ. ನಗುವೊಂದಿದ್ದರೆ ಸ್ವರ್ಗವಿದೆ. ನಂಬಿಕೆಯೊಂದಿದ್ದರೆ ಜೀವನವಿದೆ. ನಿಷ್ಕಲಶವಾದ ಭಕ್ತಿಯೊಂದಿದ್ದರೆ ಎಂತಹ ಸಂದರ್ಭದಲ್ಲೂ ಭಗವಂತನ ಅನುಗ್ರಹ ಜತೆಗಿರುತ್ತದೆ.

ಪಂಚಾಂಗ : ಭಾನುವಾರ , 15-09-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಶ್ರವಣ / ಯೋಗ: ಅತಿಗಂಡ / ಕರಣ: ಭವ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.21
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ
: ಉನ್ನತ ಅಧಿ ಕಾರ ದೊರೆಯಲಿದೆ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಎಚ್ಚರದಿಂದಿರಿ.
ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಅನವಶ್ಯಕ ಖರ್ಚು ನಿಯಂತ್ರಿಸುವುದು ಒಳಿತು.
ಮಿಥುನ: ಅನಗತ್ಯ ಹಣ ವ್ಯಯ ಮಾಡದಿರಿ.

ಕಟಕ: ಗುತ್ತಿಗೆ ಆಧಾರಿತ ಉದ್ಯೋಗ ನಡೆಸುವವ ರಿಗೆ ಜನಬಲದ ಸಮಸ್ಯೆ ಎದುರಾಗಬಹುದು.
ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಕನ್ಯಾ: ಸಂಪನ್ಮೂಲ ವೃದ್ಧಿ ಗಾಗಿ ಹೊಸ ಮಾರ್ಗ ಕಂಡು ಕೊಳ್ಳುವಲ್ಲಿ ಯಶಸ್ಸು ಸಿಗಲಿದೆ.

ತುಲಾ: ರಿಯಲ್ ಎಸ್ಟೇಟ್ ವ್ಯವಹಾರ ನಿರಾತಂಕವಾಗಿ ಮುಂದುವರಿಯಲಿದೆ.
ವೃಶ್ಚಿಕ: ಎಲ್ಲ ಕೆಲಸ-ಕಾರ್ಯ ಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಶಿಕ್ಷಣ ವೃತ್ತಿಯವರಿಗೆ ಸನ್ಮಾನ.
ಧನುಸ್ಸು: ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಮನೋವೈದ್ಯರಿಗೆ ಉತ್ತಮ ದಿನ.

ಮಕರ: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ.
ಕುಂಭ: ಹೆಚ್ಚು ಶ್ರಮ ವಹಿಸಿದರೆ ಆದಾಯ ಹೆಚ್ಚಾಗ ಲಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗಲಿದೆ.
ಮೀನ: ನಾನಾ ರೀತಿಯ ತೊಂದರೆ ಎದುರಿಸ ಬೇಕಾಗುತ್ತದೆ. ಕೋಪ ನಿಯಂತ್ರಿಸಿದರೆ ಒಳಿತು.

RELATED ARTICLES

Latest News