ನಿತ್ಯ ನೀತಿ : ದುಡಿಯದೆ ಇದ್ದರೆ ಕೆಟ್ಟು ಹೋಗುವೆ, ದುಡಿದು ಇಟ್ಟರೆ ಕೊಟ್ಟು ಹೋಗುವೆ,ಆದ್ದರಿಂದ ಅವರಿವರ, ಅದರಿದರ,ಚಿಂತೆ ಬಿಟ್ಟು ಬದುಕು ಮನವೇ,ಇಲ್ಲಿ ಎಲ್ಲಾ ನಶ್ವರವೇ.ಆರೋಗ್ಯ,ನೆಮ್ಮದಿಯಿಂದ ಬದುಕುವುದೇ ಬದುಕು.
ಪಂಚಾಂಗ : ಸೋಮವಾರ, 22-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಪ್ರತಿಪದಾ / ನಕ್ಷತ್ರ: ಉತ್ತರಾ / ಯೋಗ: ಶುಕ್ಲ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.16
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಆಸೆ ಮತ್ತು ಭಾವನೆಗಳು ಈಡೇರುವುದರಿಂದ ಮನಸ್ಸಿಗೆ ನೆಮದಿ ಸಿಗಲಿದೆ.
ವೃಷಭ: ಮಕ್ಕಳು ಅವಿಧೇಯತೆಯಿಂದ ನಡೆದು ಕೊಳ್ಳುವುದರಿಂದ ಮನಸ್ಸಿಗೆ ನೋವುಂಟಾಗಲಿದೆ.
ಮಿಥುನ: ವೃತ್ತಿ ಬದುಕಿನಲ್ಲಿ ಜವಾಬ್ದಾರಿ ಕಡಿಮೆಯಾದ ಕಾರಣ ನಿಂದನೆಗೆ ಒಳಗಾಗುವಿರಿ.
ಕಟಕ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.
ಸಿಂಹ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ಕನ್ಯಾ: ಕುಟುಂಬದಲ್ಲಿ ಕಾಣಿಸಿ ಕೊಳ್ಳುವ ಸಮಸ್ಯೆ ಗಳಿಗೆ ಅಂತ್ಯ ಸಿಗಲಿದೆ.
ತುಲಾ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.
ವೃಶ್ಚಿಕ: ಕಚೇರಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ ಮೇಲೆ ಮೇಲಾಧಿಕಾರಿಗಳಿಗೆ ಭರವಸೆ ಮೂಡಲಿದೆ.
ಧನುಸ್ಸು: ನಿಮ ಅತಿಯಾದ ಮಾತಿನಿಂದ ಮನೆ ಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ.
ಮಕರ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
ಕುಂಭ: ಸ್ವಂತ ಉದ್ಯೋಗದವರಿಗೆ ಉತ್ತಮ ದಿನ. ಧಾರ್ಮಿಕ ಚಿಂತನೆ ಮಾಡುವಿರಿ.
ಮೀನ: ಕೆಲವು ವ್ಯಾಪಾರ ಯೋಜನೆಗಳನ್ನು ತಡೆ ಹಿಡಿಯಬೇಕಾದ ಸಂದರ್ಭಗಳು ಬರಬಹುದು.