ನಿತ್ಯ ನೀತಿ : ಪ್ರಾಜ್ಞನಾದವನು ಸುಖ ಬಂದಾಗ ಬೀಗುವುದಿಲ್ಲ. ದುಃಖ ಬಂದಾಗ ಕುಗ್ಗು ವುದೂ ಇಲ್ಲ. ಎರಡನ್ನೂ ಸಮನಾಗಿ ಬರಮಾಡಿ ಕೊಳ್ಳುತ್ತಾನೆ. ಇದರಿಂದ ಆತ್ಮಶಕ್ತಿ ಜಾಗೃತವಾಗಿ ಸದಾ ಆನಂದ ಸ್ವರೂಪನಾಗಿಯೇ ಇರುತ್ತಾನೆ.
ಪಂಚಾಂಗ : ಮಂಗಳವಾರ, 23-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ /ಮಾಸ: ಆಶ್ವಯುಜ /ಪಕ್ಷ:ಶುಕ್ಲ / ತಿಥಿ: ದ್ವಿತೀಯ / ನಕ್ಷತ್ರ: ಹಸ್ತ /ಯೋಗ: ಬ್ರಹ್ಮಾ /ಕರಣ: ಬಾಲವ
ಸೂರ್ಯೋದಯ ; ಬೆ.06.09
ಸೂರ್ಯಾಸ್ತ : 06.15
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ರಾಶಿ ಭವಿಷ್ಯ
ಮೇಷ: ಚರ ಮತ್ತು ಸ್ಥಿರ ಆಸ್ತಿಯಲ್ಲಿ ಹೆಚ್ಚಳ ಕಂಡು ಬರಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.
ವೃಷಭ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಮಿಥುನ: ತಾಯಿ ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದ ಪಡೆಯಿರಿ.
ಕಟಕ: ವೈದ್ಯವೃತ್ತಿಯಲ್ಲಿರುವವರು ಅಧಿ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಸಿಂಹ: ಎಲ್ಲ ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಲಿದೆ.
ತುಲಾ: ಉದ್ಯೋಗ ಬದಲಾ ಯಿಸಲು ಯೋಚಿಸುವಿರಿ.
ವೃಶ್ಚಿಕ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.
ಧನುಸ್ಸು: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
ಮಕರ: ಸಮಾಜದಲ್ಲಿ ವಿಶೇಷವಾದ ಗೌರವ ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಕುಂಭ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಹಳೆ ಸ್ನೇಹಿತರ ಭೇಟಿ ಸಂತಸ ತರಲಿದೆ.
ಮೀನ: ಸ್ವಯಂ ಉದ್ಯೋಗಿಗಳಿಗೆ ಶುಭಕರವಾದ ದಿನ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.