Sunday, April 28, 2024
Homeಜಿಲ್ಲಾ ಸುದ್ದಿಗಳುತುಮಕೂರಿನಲ್ಲಿ ಅಗ್ನಿ ಅವಘಡ : ವ್ಯಕ್ತಿ ಸಜೀವ ದಹನ

ತುಮಕೂರಿನಲ್ಲಿ ಅಗ್ನಿ ಅವಘಡ : ವ್ಯಕ್ತಿ ಸಜೀವ ದಹನ

ತುಮಕೂರು, ನ.2- ನಗರದ ಹೊರವಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಜೀವದಹನವಾಗಿರುವ ಘಟನೆ ನಡೆದಿದೆ. ಕ್ಯಾತ್ಸಂದ್ರದ ಗೋಕುಲ ಬಡಾವಣೆಯ ನಿವಾಸಿ ಶಿವಕುಮಾರ್ ಎನ್ನುವವರಿಗೆ ಸೇರಿದ ಕಟ್ಟಡದ ಕೆಳಗಡೆ ಗೋಬಿ ಅಂಗಡಿಗೆ ಬಾಡಿಗೆಗೆ ನೀಡಲಾಗಿತ್ತು. ಮೇಲಿನ ಭಾಗದ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳನ್ನು ಶೇಖರಿಸ ಲಾಗಿತ್ತು ಎನ್ನಲಾಗಿದೆ.

ಸ್ಥಳೀಯರು ಮತ್ತು ಸುತ್ತಮುತ್ತಲಿನವರಿಗೂ ಸತ್ತ ವ್ಯಕ್ತಿಯ ಬಗ್ಗೆ ಏನೂ ಮಾಹಿತಿ ಇದ್ದಂತಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಶಾರ್ಟ್ ಸಕ್ರ್ಯೂಟಿನಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ನಂದಿಸಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿ ಒಳಗೆ ಹೋಗಿ ಪರಿಶೀಲಿಸಿದಾಗ ವ್ಯಕ್ತಿ ಶವ ಪತ್ತೆಯಾಗಿದೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಹಲವು ದಿನಗಳಿಂದ ನಿರುಪಯುಕ್ತವಾಗಿದ್ದ ಕೊಠಡಿಯಲ್ಲಿ ಈ ವ್ಯಕ್ತಿ ಯಾವಾಗ ಸೇರಿಕೊಂಡಿದ್ದ ಎನ್ನುವುದು ಕೂಡಾ ನಿಗೂಢವಾಗಿದ್ದು ತನಿಖೆಯ ನಂತರ ಸತ್ಯ ಹೊರಬೀಳಲಿದೆ. ಬೆಂಕಿಯ ಅರಿವಿಲ್ಲದೆ ಮಲಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿರಬಹುದು ಎಂಬ ಮಾಹಿತಿ ಇದೆ.

ಸುದ್ದಿ ತಿಳಿದು ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News